ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಪೆರಾಜೆಯಿಂದ ಸಂಪಾಜೆಯ ತನಕ ಬೃಹತ್ ಸ್ವಚ್ಛತಾ ಕಾರ್ಯವು ಅ.22ರಂದು ನಡೆಯಿತು.

ಈ ಸಂದರ್ಭದಲ್ಲಿ ಸಮಿತಿ ನಿರ್ವಾಹಕ ಸಂಚಾಲಕ ಚಿದಾನಂದ, ಸದಸ್ಯರುಗಳಾದ ಅಶೋಕ, ಪ್ರಸನ್ನ , ದೇವಿಪ್ರಸಾದ್, ಭಾರತಿ, ವಿಶಾಲಾಕ್ಷಿ, ದೇವಕಿ, ಕುಸುಮ, ಮೇಲ್ವಿಚಾರಕಿ ಜಯಶ್ರೀ, ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್ ಸೇರಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.