ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಶಿತ್ ಪಿ. ದ್ವಿತೀಯ

0

ಮಧ್ಯಪ್ರದೇಶ ದ ದೇವಸ್ ನಲ್ಲಿ ಅ.28 ಮತ್ತು 29 ರಂದು ನಡೆದ 14ವರ್ಷ ದ ಒಳಗಿನ ಬಾಲಕರ ವಿಭಾಗದಲ್ಲಿ ವಿದ್ಯಾಭಾರತಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆಶಿತ್ ಪಿ. ದ್ವಿತೀಯ ಸ್ಥಾನ ಪಡೆದಿದ್ದಾರೆ. ಆಗಸ್ಟ್ ನಲ್ಲಿ ವಿಟ್ಲದ ಪುಣಚದಲ್ಲಿ ನಡೆದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಇವರು ಕುಡುಪು ಶ್ರೀ ದುರ್ಗಾ ಪದ್ಮಾ ಆಟೋ ವರ್ಕ್ಸ್ ನ ಮಾಲಕ ರಾದ ಪುರುಷೋತ್ತಮ ಕಮಿಲ ಮತ್ತು ಶ್ರೀಮತಿ ಹೇಮಲತಾ ದಂಪತಿಗಳ ದ್ವಿತೀಯ ಪುತ್ರ. ಇವರು ಮಂಗಳೂರಿನ ಶಾರದಾ ಶುಭೋದಯ ವಿದ್ಯಾಲಯದಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದಾರೆ.