ಶ್ರೀರಾಜ್ ಬಿ. ಎಸ್ ಗೆ ಡಾಕ್ಟರೇಟ್

0


ಮಂಗಳೂರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗದ ಉಪನ್ಯಾಸಕ ಶ್ರೀರಾಜ್ ಬಿ. ಎಸ್ ಅವರು “ಸೋಶಿಯೊ – ಎಕನಾಮಿಕ್ ಡೆವಲಪ್ಮೆಂಟ್ ಥ್ರೂ ಟೂರಿಸಂ – ಎ ಕಂಪರೇಟಿವ್ ಸ್ಟಡಿ ಆಫ್ ಕಾಸರಗೋಡು ಅಂಡ್ ದಕ್ಷಿಣ ಕನ್ನಡ ಡಿಸ್ಟ್ರಿಕ್ಟ್” ( Socio -Economic Development through Tourism – A Comparative Study of Kasaragod and Dakshina Kannada Districts) ಎಂಬ ವಿಷಯದ ಕುರಿತಾಗಿ ಮಂಡಿಸಿದ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್. ಡಿ. ಪದವಿ ನೀಡಿ ಗೌರವಿಸಿದೆ.
ಇವರು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೊ. ಸುಭಾಷಿಣಿ ಶ್ರೀವತ್ಸ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು.
ಶ್ರೀರಾಜ್ ಬಿ. ಎಸ್. ಅವರು ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ದಿ. ಶ್ರೀಧರ ಮತ್ತು ಶ್ರೀಮತಿ ಕಮಲಾಕ್ಷಿ ರವರ ಪುತ್ರ.