ಮಂಡೆಕೋಲು : ಯಾದವ ಸಭಾ ಮಹಿಳಾ ವಾರ್ಷಿಕೋತ್ಸವ

0

ಯಾದವ ಸಭಾ ಮಂಡೆಕೋಲು ಮಹಿಳಾ ವೇದಿಕೆಯ ವತಿಯಿಂದ ಆರನೇ ವರ್ಷದ ವಾರ್ಷಿಕೋತ್ಸವವು ನ.5ರಂದು ಮಂಡೆಕೋಲಿನ ಯಾದವ ಸಮುದಾಯ ಭವನದಲ್ಲಿ ಜರುಗಿತು.
ಶಾಸಕಿ ಭಾಗೀರಥಿ ಮುರುಳ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು‌.

ಯಾದವ ಸಭಾ ಸ್ಥಾಪಕಾಧ್ಯಕ್ಷ ಹಾಗೂ ಸಭಾಧ್ಯಕ್ಷರಾದ ಶ್ರೀಮತಿ ಶಾರದಾ ರಾಮನ್ ಅವರು ತಮ್ಮ ಪ್ರಾಸ್ತವಿಕ ನುಡಿಯಲ್ಲಿ ಮಹಿಳಾ ವೇದಿಕೆಯ ಧ್ಯೇಯೋದ್ದೇಶಗಳನ್ನು ಹಾಗೂ ಆರು ವರ್ಷಗಳ ಸಾಧನೆಯನ್ನು ಸಂಕ್ಷಿಪ್ತವಾಗಿ ಸಭೆಯ ಮುಂದಿಟ್ಟರು.
ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಯಾದವ ಸಭಾ ಮಹಿಳಾ ವೇದಿಕೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ದೇಶಸೇವೆ ಮಾಡಿ ನಿವೃತ್ತರಾದ ಶೇಖರ್ ಕಣೆಮರಡ್ಕ ಹಾಗೂ ಉದಯಕುಮಾರ್ ಕಣೆಮರಡ್ಕ ಅವರನ್ನು ಸನ್ಮಾನಿಸಲಾಯಿತು.

ಊರಿನ ಉಪಕಾರಿ,ಹಾಗೂ ಯಾದವ ಸಮುದಾಯದ ರಾಮಚಂದ್ರ ಅವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪ್ರತಿಮಾ ಹೆಬ್ಬಾರ್ ಸಮುದಾಯದ,ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರ್,ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ,ಪ್ರಾದೇಶಿಕ ಸಮಿತಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ,ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ,ಮಹಿಳಾ ವೇದಿಕೆ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಶ್ರೀಮತಿ ಉಷಾ ಗಂಗಾಧರ್,
ಕಾರ್ಯದರ್ಶಿ ಶ್ರೀಮತಿ ಶಾರದಾ ಕನ್ಯಾನ ಉಪಸ್ಥಿತರಿದ್ದರು.