ಹಿರಿಯರ ಕ್ರೀಡಾಕೂಟದಲ್ಲಿ ಪ್ರಶಸ್ತಿ ಪಡೆದ ಸರಿತ ಶೆಟ್ಟಿಯವರಿಗೆ ಸನ್ಮಾನ

0


ಪಂಜದಲ್ಲಿ ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಚಕ್ರ ಎಸೆತ, ಜಾವೇಲಿನ್ ಎಸೆತ ಹಾಗೂ ಗುಂಡು ಎಸೆತದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಸುಳ್ಯ ಬಂಟರ ಸಂಘದ ಸದಸ್ಯೆ ಸರಿತಾ ನಾಗೇಶ್ ಶೆಟ್ಟಿ ಯವರನ್ನು ಸಂಘದ ಮಾಸಿಕ ಸಭೆಯಲ್ಲಿ ಹಿರಿಯರಾದ ಕಮಲಾಕ್ಷಿ ಶೆಟ್ಟಿಯವರು ಗೌರವಿಸಿದರು.
ಸಭೆಯಲ್ಲಿ ಜಯಪ್ರಕಾಶ್ ರೈ ಯವರು ಅಧ್ಯಕ್ಷತೆ ವಹಿಸಿ ದಶಂಬರ್ ೩೧ ರಂದು ಸುಳ್ಯ ಬಂಟರ ಭವನದಲ್ಲಿ ನಡೆಯಲಿರುವ ವಾರ್ಷಿಕ ಸಮಾವೇಶದ ತಯಾರಿಯ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಬಂಟರ ಸಂಘದ ಪ್ರಧಾನಕಾರ್ಯದರ್ಶಿ ಶುಭಾಸಚಂದ್ರ ರೈ, ಖಜಾಂಜಿ ಗಂಗಾಧರ ರೈ, ಆರಂತೋಡು ವಲಯಾ ಧ್ಯಕ್ಷ ಜೆ ಕೆ ರೈ, ಜಾಲ್ಸುರ್ ವಲಯಧ್ಯಕ್ಷ ಶಿವರಾಮ ರೈ, ಬಾಳಿಲ ವಲಯಧ್ಯಕ್ಷ ಕರುಣಾಕರ ರೈ, ದಯಕರ ರೈ ನಾವೂರು, ಕುಸುಮಾಧರ ರೈ,ಮಹಿಳಾಧ್ಯಕ್ಷೆ ಇಂದಿರಾ ರೈ, ಕಮಲಾಕ್ಷಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸುನಂದ ಶೆಟ್ಟಿ ಯವರು ಸ್ವಾಗತಿಸಿದರು. ಸುಭಾಶಚಂದ್ರ ರೈ ಯವರು ವಂದಿಸಿ, ಚಂದ್ರಾಕ್ಷಿ ಜೆ ರೈ ಕಾರ್ಯಕ್ರಮ ನಿರೂಪಿಸಿದರು.