ಕೆ.ಎಸ್.ಗೌಡ ಸಮೂಹ ವಿದ್ಯಾಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟ

0

ಕೆ ಎಸ್ ಗೌಡ ಸಮೂಹ ವಿದ್ಯಾ ಸಂಸ್ಥೆಗಳು ವರ್ಷ ನಗರ ನಿಂತಿಕಲ್ಲು ಇದರ ವಾರ್ಷಿಕ ಕ್ರೀಡಾಕೂಟ ನವೆಂಬರ್ 6 ನೇ ಬುಧವಾರ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಿತು.


ಶ್ರೀ ಸೀತಾರಾಮಾಂಜನೇಯ ಸೇವಾ ಪ್ರತಿಷ್ಠಾನ ( ರಿ) ಕೋಟಿ ಚೆನ್ನಯ ನಗರ ಎಣ್ಮೂರು ಇದರ ಅಧ್ಯಕ್ಷರಾದ ಶ್ರೀ ರಘುನಾಥ ರೈ ಕಟ್ಟ ಬೀಡು ಇವರ ಧ್ವಜಾರೋಹಣದೊಂದಿಗೆ ಆರಂಭ ವಾದ ಕ್ರೀಡಾ ಕೂಟದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಕುಮಾರ ಸ್ವಾಮಿ ಕೆ ಎಸ್ ಇವರು ಗೌರವ ವಂದನೆಗಳನ್ನು ಸ್ವೀಕರಿಸಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿ ಉದ್ಘಾಟಿಸಿದರು ವೇದಿಕೆಯಲ್ಲಿ ಜೆ ಸಿ ಐ ಪಂಜ ಪಂಚಶ್ರೀ ಇದರ ಅಧ್ಯಕ್ಷರಾದ ಲೋಕೇಶ್ ಅಕ್ರಿಕಟ್ಟೆ, ಕೆ ಎಸ್ ಗೌಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ವೆಂಕಟ್ರಮಣ ಗೌಡ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ, ಐಟಿಐ ವಿಭಾಗದ ಪ್ರಾಚಾರ್ಯರಾದ ಸುಧೀರ್ ಎಂ ವಿ, ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಉಮೇಶ್ ಗೌಡ ಎಚ್ ಉಪಸ್ಥಿತರಿದ್ದರು. ನಾಲ್ಕು ಸಂಸ್ಥೆಗಳ ಹನ್ನೆರಡು ತಂಡಗಳ ಕ್ರೀಡಾ ಪಟುಗಳ ಆಕರ್ಷಕ ಪಥ ಸಂಚಲನದೊಂದಿಗೆ ಕ್ರೀಡಾ ಕೂಟ ಆರಂಭ ಗೊಂಡಿತು. ಜಿಲ್ಲಾ ಮಟ್ಟದ ಕ್ರೀಡಾಪಟುಗಳಾದ ಪದವಿ ಪೂರ್ವ ವಿಭಾಗದ, ಸ್ರುಜನ್ ಎಂ, ಮೊಹಮ್ಮದ್ ಅನೀಸ್, ತ್ರಷಾ . ಸಿ ಹಾಗೂ ಪ್ರಥ್ವಿ , ಐ ಟಿ ಐ ವಿಭಾಗದ ಸುಜಿತ್, ಪ್ರೌಢ ಶಾಲಾ ವಿಭಾಗದ ರಮಿತ್ ರೈ, ಪ್ರಣವಿ ಯವರು ಕ್ರೀಡಾ ಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು. ಪದವಿ ಪೂರ್ವ ಕಾಲೇಜಿನ ಶ್ರೀರಾಜ್ ಎಂ ಅರ್ ಪ್ರತಿಜ್ಞಾ ಸ್ವೀಕಾರ ಮಾಡಿದರು. ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸದಾನಂದ ರೈ ಕೂವೆಂಜ ಎಲ್ಲರನ್ನು ಸ್ವಾಗತಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ರಾದ ಉಮೇಶ್ ಗೌಡ ಎಚ್ ಧನ್ಯವಾದ ಅರ್ಪಿಸಿದರು. ಸಂಸ್ಥೆಯ ಕಾರ್ಯಕ್ರಮಾಧಿಕಾರಿ ಪ್ರಸನ್ನ ವೈ ಟಿ ಕಾರ್ಯಕ್ರಮ ನಿರೂಪಿಸಿದರು. ಸಮೂಹ ವಿದ್ಯಾ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳನ್ನು ನಡೆಸಿಕೊಟ್ಟರು.