ಪಂಜ: ದಿ.ನಾರಾಯಣ ಸಾಲ್ಯಾನ್ ರವರಿಗೆ ಶ್ರದ್ಧಾಂಜಲಿ -ನುಡಿನಮನ

0

ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಇತ್ತೀಚೆಗೆ ನಿಧನರಾದ ಭಜನಾ ಮಂಡಳಿಯ ಸಕ್ರೀಯ ಸದಸ್ಯ ನಾರಾಯಣ ಸಾಲ್ಯಾನ್ ರವರಿಗೆ ಶ್ರದ್ಧಾಂಜಲಿ ಸಭೆ
ಡಿ.13 ರಂದು ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಸಭಾಭವನದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಗೌಡ ಪುತ್ಯ ವಹಿಸಿದ್ದರು.
ಭಜನಾ ಮಂಡಳಿ ಉಪಾಧ್ಯಕ್ಷ ಪರಮೇಶ್ವರ ಬಿಲಿಮಲೆ, ಕಾರ್ಯದರ್ಶಿ ಗುರುಪ್ರಸಾದ್ ತೋಟ, ಖಜಾಂಜಿ ಲೋಕೇಶ್ ಬರೆಮೇಲು ,ಭಜನಾ ಸಂಚಾಲಕ ಪುರುಷೋತ್ತಮ ಆಚಾರ್ಯ ನಾಗತೀರ್ಥ, ಭಜನೋತ್ಸವ ಅಧ್ಯಕ್ಷ ರಾಜಕುಮಾರ್ ಬೇರ್ಯ , ಭಜನೋತ್ಸವ ಸಮಿತಿಯ ನಿಕಟಪೂರ್ವಾಧ್ಯಕ್ಷ ಪ್ರಕಾಶ್ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಜನಾ ಮಂಡಳಿಯ ಪೂರ್ವಾಧ್ಯಕ್ಷರಾದ ಶಿವಪ್ಪ ಸಂಕಡ್ಕ ,ಮಹಾಲಿಂಗ ಸಂಪ, ಭಜನಾ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪರಮೇಶ್ವರ ಬಿಳಿಮಲೆ , ಲೋಕೇಶ್ ಬರೆಮೇಲು ,ಪ್ರಕಾಶ್ ಜಾಕೆ ಮಹಾಲಿಂಗ ಸಂಪ ನುಡಿ ನಮನ ಸಲ್ಲಿಸಿದರು.
ಕಾರ್ಯದರ್ಶಿಯಾದ ಗುರುಪ್ರಸಾದ್ ತೋಟ ವಂದಿಸಿದರು.