20 ವರ್ಷಗಳಿಂದ ವಿವೇಶನ ಹಂಚಿಕೆಯಾಗಿಲ್ಲ – 455 ಅರ್ಜಿಗಳು ಬಾಕಿ ಇದೆ ಆಶ್ರಯ ಸಮಿತಿ ರಚಿಸಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡಿ

0

ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ

”ಸುಳ್ಯ ನಗರ ವ್ಯಾಪ್ತಿಯಲ್ಲಿ ೨೦ ವರ್ಷಗಳಿಂದ ನಿವೇಶನ ಹಂಚಿಕೆಯಾಗಿಲ್ಲ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ೪೫೫ ಕುಟುಂಬಗಳು ಕಾಯುತಿದ್ದಾರೆ. ಆದ್ದರಿಂದ ಶಾಸಕರು ಈ ಕುರಿತು ಗಮನ ಹರಿಸಿ ಎರಡು ತಿಂಗಳೊಳಗೆ ಆಶ್ರಯ ಸಮಿತಿ ರಚಿಸಿ ಅರ್ಹರಿಗೆ ನಿವೇಶನ ಕೊಡಿಸುವ ಕೆಲಸ ಮಾಡಬೇಕು” ಎಂದು ಸುಳ್ಯ ಆಶ್ರಯ ಯೊಜನೆ ನಿವೇಶನ ಹಕ್ಕು ಹೋರಾಟ ಸಮಿತಿ ಒತ್ತಾಯ ಮಾಡಿದೆ.

ಡಿ.೩೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಿತಿ ಸಂಚಾಲಕ ರಶೀದ್ ಜಟ್ಟಿಪಳ್ಳರು, ವಸತಿ ನಿವೇಶನ ನಿರಾಶ್ರಿತರಿಗೆ ಸರಕಾರದಿಂದ ಕೊಡಮಾಡುವ ಆಶ್ರಯ ಯೋಜನೆ ಅಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿ ನಗರ ಆಡಳಿತಕ್ಕೆ ನಿವೇಶನಕ್ಕೆ ಬೇಕಾಗಿ ಅರ್ಜಿ ಸಲ್ಲಿಸಿದ ಬಡ ಫಲಾನುಭವಿಯರೆಗೆ ವರುಷಗಳು ೨೦ ಕಳೆದರೂ ಯಾವುದೇ ನಿವೇಶನ ದೊರಕಿಲ್ಲ. ಇದಕ್ಕೆ ಸಂಬಂಧಿಸಿ ಫಲಾನುಭವಿಯರು ಅನೇಕ ಸಲ ನಗರ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಇಲ್ಲದಂತೆ ಆಗಿದೆ. ನಂತರ ಹೋರಾಟ ಸಮಿತಿ ರಚಿಸಿ ಸಮಿತಿ ಮುಖಾಂತರ ನಗರ ಆಡಳಿತ ಮತ್ತು ಸ್ಥಳೀಯ ಜನಪ್ರಗತಿ ನಿಧಿಗಳಿಗೆ ಒತ್ತಡ ಹಾಕುತ್ತಾ ಬಂದರೂ ನಿವೇಶನ ಹಂಚಲು ಸುಳ್ಯ ನಗರ ಭಾಗದಲ್ಲಿ ಸರಕಾರಿ ಜಾಗ ಇಲ್ಲ ಎಂಬ ಸಮಜಾಯಿಷಿ ಕೊಡುತ್ತಾ ಸತಾಯಿಸಿ ಫಲಾನುಭವಿಯರನ್ನು ಹಿಂದಕ್ಕೆ ಕಳುಹಿಸಿ ನಿರಾಶೆಗೆ ಒಳಪಡಿಸುತ್ತಿದ್ದರು. ಈ ಪರಿಸ್ಥಿತಿಯಲ್ಲಿ ಹೋರಾಟ ಸಮಿತಿಯು ಸರಕಾರದಿಂದ ವಸತಿ ಯೋಜನೆಯಡಿಯಲ್ಲಿ ಸುಳ್ಯ ನಗರಕ್ಕೆ ಸಂಬಂಧಿಸಿದ ಸರ್ವೆ ನಂಬ್ರ ೨೪/೧ಂ೧ ಮತ್ತು ಸರ್ವೆ ನಂಬ್ರ ೩೭೪/೨ ಎರಡೂ ಸರಕಾರಿ ನಿವೇಶನಗಳ ಭೂ ದಾಖಲಾತಿಯನ್ನು ಆಧಾರ ಸಹಿತ ತಾಲೂಕು ಕಛೇರಿಗೆ ನೀಡಿ ಆಗಿನ ತಹಶೀಲ್ದಾರರಾದ ಅನಿತಾಲಕ್ಷ್ಮಿಯವರು ಪರಿಶಿ ಸರ್ವೆಯನ್ನು ಮಾಡಿಸಿ, ಕಂದಾಯ ಪರಿಶೀಲಿಸಿ ಸರ್ವೆಯರ್ ಆದ ಜಗದೀಶ್ ಅವರಲ್ಲಿ ಇಲಾಖೆಯ ಕೆಲಸವನ್ನು ಮುಗಿಸಿ ನಗರ ಪಂಚಾಯತ್ ಆಡಳಿತಕ್ಕೆ ಮುಂದಿನ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ.


ಅಲ್ಲಿನ ಮುಖ್ಯಾಧಿಕಾರಿಗಳನ್ನು ವಿಚಾರಿಸಿದಾಗ ಕಾರ್ಯ ಪ್ರಗತಿಯಲ್ಲಿದ್ದು, ಮುಂದೆ ಎರಡು ಸರ್ವೆ ನಂಬ್ರಗಳ ಸ್ಥಳಗಳನ್ನು ಸಮತಟ್ಟು ಮಾಡಲು ಈಗಾಗಲೇ ಟೆಂಡರ್ ಕರೆದಿದ್ದು, ಒಂದು ವಾರದೊಳಗೆ ಸಮತಟ್ಟಿನ ಕೆಲಸ ಆರಂಭಿಸಿ. ಅಲ್ಲಿ ಎಷ್ಟು ನಿವೇಶನ ಕೊಡಬಹುದು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ಯೋಜನೆ ಮಾಡುತ್ತಿzವೆ. ಆದರೂ ನೂತನ ಶಾಸಕರ ಉಪಸ್ಥಿತಿಯಲ್ಲಿ ಆಶ್ರಯ ಸಮಿತಿಯನ್ನು ರಚಿಸಿ, ಹಂಚುವ ವಿಧಾನವನ್ನು ತಿಳಿಸಿರುತ್ತಾರೆ. ಆದ್ದರಿಂದ ಮಾನ್ಯ ಶಾಸಕರು ಆದಷ್ಟು ಬೇಗನೆ ಆಶ್ರಯ ಸಮಿತಿಯನ್ನು ರಚಿಸಲು ಸರ್ಕಾರವನ್ನು ಒತ್ತಾಯಿಸಿ, ಸುಮಾರು ೨೦ ವರ್ಷದಿಂದ ಮೇಲ್ಪಟ್ಟು ನಿವೇಶನಕ್ಕೆ ಬೇಕಾಗಿ ೪೫೫ ಅರ್ಜಿಗಳು ಕೆಲವು ವರ್ಷಗಳಿಂದ ವಿಲೇವಾರಿಯಾಗದೇ ಬಾಕಿ ಉಳಿದಿದ್ದು, ಇದನ್ನು ಕಾಯುತ್ತಾ ಬಾಡಿಗೆ ಮನೆಯಲ್ಲಿ ವಾಸಿಸುವ ಅನೇಕ ಫಲಾನುಭವಿಗಳಿಗೆ ಆದಷ್ಟು ಬೇಗನೆ ನಿವೇಶನ ದೊರಕಿಸುವ ನಿಟ್ಟಿನಲ್ಲಿ ಮಾನ್ಯ ಶಾಸಕರಿಗೂ ಮತ್ತು ಸರಕಾರಕ್ಕೂ ಒತ್ತಾಯಿಸುತ್ತಿzವೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅರ್ಜಿ ಸಲ್ಲಿಸಿರುವ ರಾಜೇಶ್ವರ ಮಣಿಯಾಣಿ ಜೂನಿಯರ್ ಕಾಲೇಜು ಬಳಿ, ಪದ್ಮನಾಭ ನಾಯ್ಕ್ ಜಟ್ಟಿಪಳ್ಳ, ಕವಿತಾ ಅಶೋಕ್ ಜಟ್ಟಿಪಳ್ಳ, ಸಾವಿತ್ರಿ ಶಿವಶಂಕರ್ ಜಟ್ಟಿಪಳ್ಳ, ಮಮತಾ ರೋಟರಿ ಶಾಲೆ ಇದ್ದರು.