ಸುಳ್ಯ ಉಪ ಖಜಾನಾಧಿಕಾರಿ‌ ಬಾಲಕೃಷ್ಣರಿಗೆ ಬೀಳ್ಕೊಡುಗೆ

0

ಸುಳ್ಯ‌ ಖಜಾನೆ ಇಲಾಖೆಯ ಉಪ ಖಜಾನಾಧಿಕಾರಿ ಬಾಲಕೃಷ್ಣ ಎಂ ರವರು ಡಿ.31 ರಂದು ನಿವೃತ್ತರಾಗಲಿದ್ದು, ಅವರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರಕಾರಿ‌ ನೌಕರರ ಸಂಘದಿಂದ ಬೀಳ್ಕೊಡುಗೆ‌ ಮಾಡಲಾಯಿತು.

ಸರಕಾರಿ ನೌಕರರ ಸಂಘದಿಂದ ತಹಶೀಲ್ದಾರ್ ‌ಮಂಜುನಾಥ್, ನೌಕರರ ಸಂಘದ ಅಧ್ಯಕ್ಷ ‌ತೀರ್ಥರಾಮ ಹೊಸೊಳಿಕೆ‌ ಮೊದಲಾದವರಿದ್ದು ಗೌರವಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ ಗೌಡ, ಪ್ರಧಾನ ಕಾರ್ಯದರ್ಶಿ ಪದ್ಮನಾಭ ಅತ್ಯಾಡಿ, ಜಿಲ್ಲಾ ಸಂಘಟನಾ‌ ಕಾರ್ಯದರ್ಶಿ ಕುಶಾಲಪ್ಪ ತುಂಬತ್ತಾಜೆ, ತಾಲೂಕು ಸಂಘಟನಾ ಕಾರ್ಯದರ್ಶಿ ಸರೋಜಿನಿ, ರತ್ನಾಕರ ಪರಿವಾರ‌ ಮೊದಲಾದವರು ಇದ್ದರು.