ಕಿಡಿಗೇಡಿಗಳು ಬ್ಯಾನರ್ ಹರಿಯಬಹುದು – ಹಿಂದೂಗಳ ವಿಶ್ವಾಸವನ್ನಲ್ಲ

0

ಸುಳ್ಯದಲ್ಲಿ ಅಯೋಧ್ಯಾ ಶ್ರೀರಾಮನ ಭಾವಚಿತ್ರವಿದ್ದ ಬ್ಯಾನರ್ ಹರಿದ ಪ್ರಕರಣಕ್ಕೆ ಬಿಜೆಪಿ ಮಂಡಲಾಧ್ಯಕ್ಷ ಕಂಜಿಪಿಲಿ ಪ್ರತಿಕ್ರಿಯೆ

ಸುಳ್ಯದ ಮುಖ್ಯ ರಸ್ತೆಯಲ್ಲಿ ರಿಕ್ಷಾ ಚಾಲಕರು‌ ಹಾಕಿದ್ದ ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಯ ಬ್ಯಾನರ್ ಹರಿದದ್ದು ಕಿಡಿಗೇಡಿಗಳ ಹೇಡಿತನದ ಕೆಲಸ, ಮಾತ್ರ ಅಲ್ಲ ಇದಕ್ಕೆ ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ರಂತಹ ಹಿಂದೂ ವಿರೋಧಿ ನಾಯಕರ ಹೇಳಿಕೆಯೇ ಪ್ರೇರಣೆ. ಕಿಡಿಗೇಡಿಗಳು ಬ್ಯಾನರ್ ಹರಿಯಬಹುದೇ‌ ಹೊರತು ಹಿಂದೂಗಳ‌ ವಿಶ್ವಾಸವನ್ನಲ್ಲ ಎಂದು‌ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ‌ಹರೀಶ್ ಕಂಜಿಪಿಲಿ ‌ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಬ್ಯಾನರ್ ಹರಿದಿರಬಹುದು ಆದರೆ ಹಿಂದೂ ಸಮಾಜ ನಿಮಗೆ ತಕ್ಕ ಉತ್ತರ ನೀಡಲಿದೆ. ಪ್ರತಿಯೊಬ್ಬ ಸ್ವಾಭಿಮಾನಿ ಹಿಂದೂ ಬಂಧು ತಮ್ಮ ತಮ್ಮ ಶಕ್ತಿಗೆ ಅನುಸಾರವಾಗಿ ಅಯೋಧ್ಯಾ ರಾಮ ಮಂದಿರದ ಹೊಸ ಹೊಸ ಬ್ಯಾನರ್ ಗಳನ್ನು ಸುಳ್ಯ ದಾದ್ಯಂತ ಹಾಕಬೇಕಾಗಿ ಸುಳ್ಯ ಮಂಡಲ ಬಿಜೆಪಿ ಕರೆ ಕೊಡುತ್ತಿದೆ ಎಂದು ಅವರು ತಿಳಿಸಿದ್ದಾರೆ.