ದೊಡ್ಡತೋಟದಲ್ಲಿ ಗೋಪಾಲಕೃಷ್ಣ ಕ್ಲಿನಿಕ್ ಶುಭಾರಂಭ

0

ಎಲಿಮಲೆಯಲ್ಲಿ ಕಾರ್ಯಾಚರಿಸುತಿದ್ದ ಡಾ. ಮುರಲಿ ಮೋಹನ್ ವಿ ಯವರ ಗೋಪಾಲಕೃಷ್ಣ ಕ್ಲಿನಿಕ್ ನ್ನು ದೊಡ್ಡತೋಟ ವಿಷ್ಣು ಕೃಪಾ ಸಂಕೀರ್ಣದಲ್ಲಿ ತಾಲೂಕು ಮುಖ್ಯ ಆರೋಗ್ಯಾಧಿಕಾರಿ ಡಾ. ನಂದಕುಮಾರ್ ಬಾಳಿಕಳರವರು ಜ‌.21 ಉದ್ಘಾಟಿಸಿದರು.
ಈ ಸಂದರ್ಭ ಭಾರತೀಯ ವೈದ್ಯಕೀಯ ಸಂಘದ ಕೇಂದ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಹಿರಿಯ ವೈದ್ಯರಾದ ಡಾ ಜಿ ಕೆ ಭಟ್ ಸಂಕಬಿತ್ತಿಲು, ತಜ್ಞವೈದ್ಯರಾದ ಡಾ. ರವಿಶಂಕರ ಎಸ್ ಹಾಗೂ ಡಾ. ವೆಂಕಟಕೃಷ್ಣ ಭಟ್ ಸಂಕಹಿತ್ಲು ,ಮೂಲೆತೋಟ ವಿಷ್ಣು ಭಟ್ ,ತಾಲೂಕಿನ ಹಿರಿಯ ವೈದ್ಯ ಡಾ. ಎಂ ಬಿ ಪಾರೆ, ಕೆದುಂಬಾಡಿ ಸೀತಾರಾಮ ಭಟ್ , ಎಂ ಜಿ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.