ರೈಟ್ ಟು ಲಿವ್ ಕೋಟೆ ಫೌಂಡೇಶನ್ ವತಿಯಿಂದ ಉಬರಡ್ಕ ಮಿತ್ತೂರು ಶಾಲೆಯಲ್ಲಿ ಶಾಚಾಲಯ ಉದ್ಘಾಟನೆ

0

ರೈಟ್ ಟು ಲಿವ್ ಕೋಟೆಫೌಂಡೇಶನ್ ವತಿಯಿಂದ ಕೊಡಮಾಡಿದ ಶಾಚಾಲಯದ ಉದ್ಘಾಟನೆ ಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪೂರ್ಣಿಮಾ ಸೂತೋಡು ಜ‌. 26ರಂದು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಪುರುಷೋತ್ತಮ ಪಾಪುನಡ್ಕ ವಹಿಸಿದ್ದರು. ವೇದಿಕೆಯಲ್ಲಿ ರೈಟ್ ಟು ಲಿವ್ ಕೋಟೆ ಫೌಂಡೇಶನ್ ನ ಕೋ ಆರ್ಡಿನೆಟರ್ ಪ್ರದೀಪ್ ಹುಳಿಯಡ್ಕ, ಹಳೆ ವಿದ್ಯಾರ್ಥಿಸಂಘದ ಅಧ್ಯಕ್ಷರಾದ ಹರೀಶ್ ಉಬರಡ್ಕ, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪಿ ಎಸ್ ಗಂಗಾಧರ್, ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ, ಶಿಕ್ಷಕಿ ಧನಲಕ್ಷ್ಮೀ ಹುಳಿಯಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಶಿಕ್ಷಕ ವೃಂದ, ಎಸ್.ಡಿ‌.ಎಂ.ಸಿ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.