ಹಾಲೆಮಜಲು : ಕುಶಲವ ಯಕ್ಷಗಾನ ಪ್ರದರ್ಶನ

0

ಶಾರದಾಂಬ ಯಕ್ಷಗಾನ ಕಲಾಕ್ಷೇತ್ರ ಅಧ್ಯಯನ ಕೇಂದ್ರ ಪಂಜ ಇದರ ಮಕ್ಕಳಿಂದ ಯಕ್ಷಮಣಿ ಗಿರೀಶ್ ಗಡಿಕಲ್ಲುಅವರ ನಿರ್ದೇಶನದಲ್ಲಿ ಹಾಲೆಮಜಲು ಶ್ರೀ ವೆಂಕಟೇಶ್ವರ ಸಭಾಭವನದ ಮಾಲೀಕರಾದ ದಿ. ರುಕ್ಮಿಣಿ ಹೊನ್ನಪ್ಪ ಗೌಡ ಕಟ್ಟಿಕೊಡಿರವರ ಸ್ಮರಣಾರ್ಥ ಕುಶಲವ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಯಕ್ಷಮಣಿ ಗಿರೀಶ್ ಗಡಿಕಲ್ಲುರವರನ್ನು ಹಾಗೂ ಕಲಾವಿದಮಕ್ಕಳನ್ನು ಯತೀಂದ್ರ ಕಟ್ಟಿಕೋಡಿ ದಂಪತಿಗಳು ಫಲ ಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ದುಗಪ್ಪ ಗೌಡ ಕುಳ್ಳಂಪಾಡಿ ಉಪಸಿತರಿದ್ದರು. ಯಕ್ಷಗಾನ ಪ್ರೇಕ್ಷಕರಿಗೆ ಯತೀಂದ್ರ ಕಟ್ಟೆ ಕೋಡಿಮತ್ತು ಮನೆಯವರು ಉಚಿತ ಭೋಜನದ ವ್ಯವಸ್ಥೆಯನ್ನು ಮಾಡಿದರು. ಹರಿಶ್ಚಂದ್ರ ಕುಳ್ಳಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಪೂರ್ಣ ಭೋಜನ ವ್ಯವಸ್ಥೆ ಮಾಡಿದರು. ( ವರದಿ ಡಿಎಚ್.)