ಪೇರಡ್ಕ ಉರೂಸ್ ಸಮಾರೋಪ ಸಮಾರಂಭ ಹಾಗೂ ಸರ್ವಧರ್ಮ ಸಮ್ಮೇಳನ

0

ಸಂಪಾಜೆ ಗ್ರಾಮದ ಪೇರಡ್ಕ ದರ್ಗಾ ಶರೀಫ್ ನ ಉರೂಸ್ ಹಾಗೂ ಸರ್ವಧರ್ಮ ಸಮ್ಮೇಳನವು ಫೆ.11 ರಂದು ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಸಮಾರೋಪಗೊಂಡಿತು.

ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಪ್ರಭಾಷಣಗಾರರಾಗಿ ಅಜೀಜ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿದರು.
ಅತಿಥಿಗಳಾಗಿ ಸ್ಥಳೀಯ ಮಸೀದಿ ಖತೀಬರಾದ ರಿಯಾಜ್ ಫೈಜಿ, ಡಾ. ಡಿ.ವಿ. ಲೀಲಾದರ್, ಕೆ.ಟಿ ವಿಶ್ವನಾಥ್, ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ. ಹನೀಫ್, ಜಗದೀಶ್ ರೈ ಸಂಪಾಜೆ, ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ ಚಕ್ರಪಾಣಿ, ಅಬ್ದುಲ್ ಗಫೂರ್ ಕಲ್ಮಡ್ಕ, ಪೈಂಬಾಚ್ಚಲ್ ಹಮೀದ್ ಕುತ್ತಮೊಟ್ಟೆ ಉಪಸ್ಥಿತರಿದ್ದರು.

. ಸರ್ವಧರ್ಮ ಸಮ್ಮೇಳನ ನಂತರ ನಡೆದ ಧಾರ್ಮಿಕ ಉಪನ್ಯಾಸವನ್ನು ಸ್ಥಳೀಯ ಖತೀಬರಾದ ರಿಯಾಜ್ ಫೈಜಿ ನೀಡಿದರು, ದುವಾ ಆಶೀರ್ವಚನವನ್ನು ಸೈಯದ್ ಜೈನುಲ್ ಆಬಿದೀನ್ ತಂಙಳ್ ದುಗುಲಡ್ಕ ನೀಡಿದರು. ಜಿ.ಕೆ. ಹಮೀದ್ ಸ್ವಾಗತಿಸಿ, ಟಿ.ಎಂ .ಶಹೀದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಬ್ದುಲ್ ಖಾದರ್ ವಂದಿಸಿದರು. ಸಮಾರಂಭದ ಕೊನೆಯಲ್ಲಿ ಅನ್ನದಾನ ನಡೆಯಿತು.