ಬೆಂಗಳೂರಿನಲ್ಲಿ ಮೇಳೈಸಲಿದೆ ನಮ್ಮ ಕರಾವಳಿ ಉತ್ಸವ, ಸುದ್ದಿ ಚಾನೆಲ್ ನಲ್ಲಿ‌ ನೇರಪ್ರಸಾರ

0

ಕರಾವಳಿಗರ ಒಕ್ಕೂಟ ರಿ, ಬೆಂಗಳೂರು ಇರದ ಆಶ್ರಯದಲ್ಲಿ ಕಡಲ ಕರೆಯ ಬದುಕು ಬಣ್ಣ-ಭಾವ ನಮ್ಮ ಕರಾವಳಿ ಉತ್ಸವ ಇಂದು ಬೆಂಗಳೂರಿನ ಬಿಬಿಎಂಪಿ ಆಟದ ಮೈದಾನದಲ್ಲಿ ಬೆಳಿಗ್ಗೆಯಿಂದ ರಾತ್ರಿ 9.00ರ ತನಕ ನಡೆಯಲಿದೆ. ಬೆಂಗಳೂರು ಬಿಬಿಎಂಪಿ ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮವಾಗಿ ಕರಾವಳಿಗರ ಒಕ್ಕೂಟದಿಂದ ಸಾಂಸ್ಕೃತಿಕ ವೈಭವ, ಕುಂದಗನ್ನಡದ ರಾಯಭಾರಿ ಮನು ಹಂದಾಡಿಯವರಿಂದ ನಗೆ ಹಬ್ಬ, ಕಾಮಿಡಿ‌ ಕಿಲಾಡಿ ರಾಕೇಶ್ ಪೂಜಾರಿ ಮೂಡಬಿದಿರೆ ತಂಡದಿಂದ ನಗೆ ಬುಗ್ಗೆ, ಅಂಬಾಭವಾನಿ ಮರಾಟಿ ವೇದಿಕೆಯಿಂದ ಕರಾವಳಿ ಕಲಾ ವೈಭವ, ಯಕ್ಷ ಸಂಭ್ರಮ ತಂಡದಿಂದ ಪಂಜುರ್ಲಿ ಯಕ್ಷಗಾನ ಹಾಗೂ ಕ್ರೀಡಾ ಸ್ಪರ್ಧೆಗಳಾಗಿ ಪುರುಷರು, ಮಹಿಳೆಯರಿಗೆ ಹಗ್ಗಜಗ್ಗಾಟ, ಮಡಿಕೆ ಒಡೆಯುವುದು, ಮಹಿಳೆಯರಿಗೆ ಚುಕ್ಕಿ ರಂಗೋಲಿ, ಮಕ್ಕಳಿಗೆ ಚಿತ್ರಕಲೆ ನಡೆಯಲಿದೆ. ವಿಶೇಷವಾಗಿ ಕರಾವಳಿಯ ಸ್ವಾದಿಷ್ಟ ಖಾದ್ಯಗಳ ಆಹಾರಮೇಳ ನಡೆಯಲಿದೆ.

ಕಾರ್ಯಕ್ರಮ ಸುದ್ದಿ ಯೂಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳುತ್ತಿದೆ