ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವತಿಯಿಂದ ಯೋಗ ಸಾಧಕರಿಗೆ ಸನ್ಮಾನ

0

ಸುಳ್ಯ ಕನ್ನಡ ಭವನದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವತಿಯಿಂದ ಫೆ.25 ರಂದು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆ ಮಾಜಿ ಸಚಿವ ಎಸ್ ಅಂಗಾರ ರವರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು, ಅಂತರರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಕ್ರೀಡಾಪಟು ವಿನಯ್ ನಾರಾಲು, ರೋಟರಿ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ಚಿಂತನ ಉಪಸ್ಥಿತರಿದ್ದರು. ಯೋಗ ಸಾಧಕರಾದ ಹಾರ್ದಿಕ ಕೆರೆಕ್ಕೋಡಿ, ತನುಷ್ ಕೆ.ಆರ್, ಶ್ರೀಮಾ ಕೆ.ಎಚ್, ಸೋನಾ ಅಡ್ಕಾರ್, ತನುಷ್ ಎಂ.ಹೆಚ್, ಮೋನಿಷ್ ತಂಟೆಪ್ಪಾಡಿ, ದೀಕ್ಷಾ ಎಲಿಮಲೆ, ಅವನಿ ಎಂ.ಎಸ್.ಗೌಡ ರವರನ್ನು ಸನ್ಮಾನಿಸಲಾಯಿತು. ತಾಲೂಕು ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ ಯೋಗ ಪಟುಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ ನಡೆಯಿತು. ಸಂಸ್ಥೆಯ ಯೋಗ ಶಿಕ್ಷಕ ಸಂತೋಷ್ ಮುಂಡಕಜೆ ಸ್ವಾಗತಿಸಿ ವಂದಿಸಿದರು. ಪ್ರಶ್ವೀಜ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.