ಕೇನ್ಯದಲ್ಲಿ ರಂಜಿಸಿದ ಶ್ರೀ ದೇವಿ ಮಹಾತ್ಮೆ

0

ಶ್ರೀಮತಿ ಮತ್ತು ಶ್ರೀ ಟಿ. ರಾಮದಾಸ (ರವಿ) ಆಳ್ವ ಇವರ ಸೇವಾ ರೂಪದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಮಾ. 2ರಂದು ಶ್ರೀ ದೇವಿ ಮಹಾತ್ಮೆ ಎಂಬ ಪುಣ್ಯ ಕಥಾಭಾಗ ಬಳ್ಪ ಗ್ರಾಮದ ಕೇನ್ಯ ಪುಂಚತ್ತಾಡಿ ಮಾಗಣಿ ತರವಾಡು ಮನೆಯಂಗಳದಲ್ಲಿ ನಡೆಯಿತು.

ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಶ್ರೀಮತಿ ಮತ್ತು ಶ್ರೀ ಟಿ. ರಾಮದಾಸ (ರವಿ) ಆಳ್ವರ ಕುಟುಂಬಸ್ಥರು, ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.