ಭಕ್ತಿ ಸಂಭ್ರಮದಿಂದ ನಡೆದ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದೇರುಗಳ ನೇಮೋತ್ಸವ

0

ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ್ಯ ಆದಿಬೈದೆರುಗಳ ನೇಮೋತ್ಸವ ಮಾ. 23 ರಂದು ನಡೆಯಿತು. ಮಾ. 22 ರಂದು ಇಷ್ಟ ದೇವತೆ ನೇಮೋತ್ಸವ ನಡೆದು, ರಾತ್ರಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.

ಮಾ. ೨೩ರಂದು ಬೆಳಿಗ್ಗೆ ನಾಗ ತಂಬಿಲ, ಬಳಿಕ ಮುಹೂರ್ತ ತೋರಣ ಮಧ್ಯಾಹ್ನ ಕಟ್ಟಬೀಡಿನಿಂದ ಪೂರ್ವ ಸಂಪ್ರದಾಯದಂತೆ ಭಂಡಾರ ಬಂದು, ನೇತ್ರಾದಿ ಗರಡಿಯಲ್ಲಿ ದರ್ಶನ, ರಾತ್ರಿ ಬೈದೇರುಗಳು ಗರಡಿ ಇಳಿದು, ಬಳಿಕ ಕಿನ್ನಿದಾರು ಗರಡಿ ಇಳಿದು ರಂಗಸ್ಥಳ ಪ್ರವೇಶ ನಡೆಯಿತು. ಪ್ರಾತ:ಕಾಲ ಗಂಟೆ ೩-೩೦ಕ್ಕೆ ಎಣ್ಮೂರು ಕಟ್ಟಬೀಡಿಗೆ ಬೈದೇರುಗಳು ಹಾಲು ಕುಡಿಯಲು ಬಂದು ಬೀಡಿಗೆ ಕಾಣಿಕೆ ಅರ್ಪಿಸಿ, ಬೆಳಿಗ್ಗೆ ಕೋಟಿ ಚೆನ್ನಯ್ಯರ ದರ್ಶನ ರಂಗಸ್ಥಳದಲ್ಲಿ ( ಸೇಟು) ಬೈದೇರುಗಳ ಸೇಟು ಬಳಿಕ ಬೈದೇರುಗಳಲ್ಲಿ ಅರಿಕೆ, ಗಂಧ ಪ್ರಸಾದ ಮತ್ತು ತುಲಾಭಾರ ನಡೆಯಿತು. ಊರ ಹಾಗೂ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದು, ದೈವದ ಗಂಧ ಪ್ರಸಾದ ಸ್ವೀಕರಿಸಿದರು.