ಸುಳ್ಯದಲ್ಲಿ ಆಧಾರ್ ಸೇವಾಕೇಂದ್ರ ಪುನರಾರಂಭಿಸಲು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಮನವಿ

0

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಸುಳ್ಯದಲ್ಲಿ ಆಧಾರ್ ಸೇವಾಕೇಂದ್ರ ಪುನರಾರಂಭಿಸಲು ಸುಳ್ಯ ಅಂಚೆಪಾಲಕರ ಮುಖಾಂತರ ಮೂಲಕ ಪುತ್ತೂರು ಸುಪರಿಡೆಂಟ್ ಆಫಿಸರ್ ರವರಿಗೆ ಮನವಿ ನೀಡಲಾಯಿತು.

ಈ ಮೊದಲು ಆಧಾರ್ ಸೇವಾ ಕೇಂದ್ರ ಕಾರ್ಯಾಚರಿಸುತ್ತಿದ್ದು. ಈಗ ಸುಮಾರು ಸಮಯಗಳಿಂದ ಸ್ಥಗಿತಗೊಂಡಿದೆ. ಈದೀಗ ಶಾಲಾ ಕಾಲೇಜುಗಳು ಪ್ರಾರಂಭಗೊಳ್ಳುವ ಸಮಯವಾದ ಕಾರಣ ವಿದ್ಯಾರ್ಥಿಗಳ ಬಯೋ ಮೆಟ್ರಿಕ್ ಅಪ್ಡೇಟ್, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ ಮುಂತಾದ ಹಲವಾರು ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಇತರರ ಅನುಕೂಲಕ್ಕಾಗಿ ಸುಳ್ಯ ಅಂಚೆ ಕಛೇರಿಯಲ್ಲಿ ಆಧಾರ್ ಸೇವಾ ಕೇಂದ್ರ ಪುನರಾರಂಭಿಸಬೇಕೆಂದು ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಕಾರ್ಯದರ್ಶಿಗಳಾದ ಕಬೀರ್ ಜಟ್ಟಿಪಳ್ಳ ಮತ್ತು ಸಿದ್ದೀಖ್ ಎಲಿಮಲೆ ಮನವಿ ನೀಡದರು.