ಕನಕಮಜಲು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಧನಸಹಾಯ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕನಕಮಜಲು, ಜಾಲ್ಸುರು ವಲಯದ ವತಿಯಿಂದ ಕನಕಮಜಲು ಗ್ರಾಮದ ಶಿವಾನಿ ಸಂಘದ ಸದಸ್ಯೆ ಶ್ರೀಮತಿ ಜಯಂತಿ ಯವರ ಪತಿ ರಾಮಚಂದ್ರ ಗೌಡರ ಹೃದಯ ಚಿಕಿತ್ಸೆಗೆ ಶ್ರೀ ಕ್ಷೇತ್ರದಿಂದ ಮಂಜೂರಾದ ರೂಪಾಯಿ 30,000 ಮೊತ್ತದ ಚೆಕ್ಕನ್ನು ಮೇ.29ರಂದು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಜಾಲ್ಸೂರು, ವಲಯ ಜನಜಾಗೃತಿ ವೇದಿಕೆ ವಲಯಧ್ಯಕ್ಷ ಭಾಸ್ಕರ ಅಡ್ಕಾರು, ಕನಕಮಜಲು ಒಕ್ಕೂಟ ದ ಅಧ್ಯಕ್ಷೆ ಶ್ರೀಮತಿ ಪ್ರೇಮ ಅಡ್ಕಾರು, ಜನಜಾಗೃತಿ ವೇದಿಕೆಯ ಸದಸ್ಯರಾದ ವಾಸುದೇವ ಪೆರುಂಬಾರು, ದಾಮೋದರ ಕೋಡ್ತೀಲು, ಜಾಲ್ಸೂರು ವಲಯದ ಮೇಲ್ವಿಚಾರಕ ತೀರ್ಥರಾಮ, ಸೇವಾಪ್ರತಿನಿಧಿ ಶ್ರೀಮತಿ ಚಂದ್ರಾವತಿ ಮತ್ತು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.