ಸುಳ್ಯ ಪೋಲೀಸ್ ಠಾಣೆ ಸಮೀಪ ಮುಖ್ಯ ರಸ್ತೆಯನ್ನು ಸರಿ ಪಡಿಸಿದ ನಗರ ಪಂಚಾಯತ್

0

ಸುಳ್ಯ ಪೋಲೀಸ್ ಸಮೀಪ, ಮುಖ್ಯ ರಸ್ತೆಯಲ್ಲಿ ನ.ಪಂ. ನೀರು ಸರಬರಾಜಿಗಾಗಿ ಅಗೆಯದು ಸರಿಯಾಗಿ ಮುಚ್ಚದೇ ಇದ್ದ ರಸ್ತೆಯ ಹೊಂಡ ಗುಂಡಿಗಳನ್ನು ನಿನ್ನೆ ರಾತ್ರಿ ನ.ಪಂ. ನೇತೃತ್ವದಲ್ಲಿ ಸರಿಪಡಿಸಲಾಗಿದೆ.

ರಸ್ತೆ ಅಗೆದು ಸರಿಯಾಗಿ‌ ಮುಚ್ಚದೇ ಇರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಈ‌ಕುರಿತು ಸುದ್ದಿ‌ ಮಾಧ್ಯಮದಲ್ಲಿ ವರದಿ ಪ್ರಕಟವಾಗಿತ್ತು. ನ.ಪಂ. ನಾಮನಿರ್ದೇಶನ ಸದಸ್ಯ ‌ರಾಜು ಪಂಡಿತ್ ರವರು ಕೂಡಾ ನ.ಪಂ. ಗಮನ ಸೆಳೆದಿದ್ದರು. ಪ್ರಯತ್ನದ ಫಲವಾಗಿ ನಿನ್ನೆ ರಾತ್ರಿ ನ.ಪಂ. ಕಾಂಕ್ರೀಟ್ ಹಾಕಿ ರಸ್ತೆ ಸರಿಪಡಿಸಿದೆ.

ಕೆಲಸ ಆರಂಭದಿಂದ ಮುಕ್ತಾಯದ ವರೆಗೆ ನ.ಪಂ. ನಾಮನಿರ್ದೇಶನ ಸದಸ್ಯ ರಾಜು ಪಂಡಿತ್ ಸ್ಥಳದಲ್ಲಿದ್ದು, ಕಾಮಗಾರಿ ನೋಡಿಕೊಂಡರು.