ಪಂಬೆತ್ತಾಡಿ: ಮಂಚಿಕಟ್ಟೆಯಲ್ಲಿ ಶ್ರಮದಾನ ಮೂಲಕ ಮನೆಯ ಛಾವಣಿ ದುರಸ್ಥಿ

0

ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಇವರ ನೇತೃತ್ವದಲ್ಲಿ ಕಲ್ಮಡ್ಕ ಗ್ರಾಮ ಪಂಚಾಯತ್ ವತಿಯಿಂದ ಚಿಗುರು ಗೆಳೆಯರ ಬಳಗ (ರಿ.) ಪಂಬೆತ್ತಾಡಿ ಇವರ ಸಹಕಾರದೊಂದಿಗೆ ಜು.7 ರಂದು ಒಬ್ಬಂಟಿ ಜೀವನವನ್ನು ನಡೆಸುತ್ತಿರುವ ಪಾರ್ವತಿ ಮಂಚಿಕಟ್ಟೆ ಇವರ ಮನೆಯ ಛಾವಣಿಯು ಹಲವು ಸಮಯಗಳಿಂದ ಮುರಿದು ಬೀಳುವ ಸ್ಥಿತಿಯಲ್ಲಿ ಇದ್ದದನ್ನು ಹೊಸ ಶೀಟು ಹಾಕಿ ಸರಿಪಡಿಸಿಲಾಯಿತು.


ಚಿಗುರು ಗೆಳೆಯರ ಬಳಗ ಇದರ ಅಧ್ಯಕ್ಷ ಶ್ರೀನಿವಾಸ ಭೀಮಗುಳಿ ಹಾಗೂ ಸದಸ್ಯರುಗಳಾದ ವಿನಯ್ ಕರಿಕ್ಕಳ, ಹರ್ಷ ಮಡಿವಾಳಮಜಲು, ಗಣೇಶ್ ಕರಿಕ್ಕಳ, ದೀಕ್ಷಿತ್ ಬರ್ಲಾಯಬೆಟ್ಟು, ತೀರ್ಥೇಶ್ ಮಡಪ್ಪಾಡಿ, ತೀರ್ಥೇಶ್ ಕೋಟೆಗುಡ್ಡೆ, ಮೋಹನ್ ಮಂಚಿಕಟ್ಟೆ, ಭಾಸ್ಕರ ಕರಿಕ್ಕಳ ಇವರು ಸಹಕರಿಸುತ್ತಾರೆ.