ಬಳ್ಪ: ಶ್ರೀ ಕ್ಷೇ.ಧರ್ಮಸ್ಥಳ ಗ್ರಾ.ಯೋ. ಸಮುದಾಯ ಅಭಿವೃದ್ಧಿ ವಿಭಾಗದಿಂದ ಮಂಜೂರಾದ ರೂ 1ಲಕ್ಷ ಮೊತ್ತದ ಡಿಡಿ ವಿತರಣೆ

0


ಬಳ್ಪ ಗ್ರಾಮದ ಎಣ್ಣೆಮಜಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಮಂಜೂರಾದ ರೂ 1ಲಕ್ಷ ಮೊತ್ತದ ಡಿಡಿ ಯನ್ನು
ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ರವರು ದೇವಸ್ಥಾನದ ಅಧ್ಯಕ್ಷ ನಿತ್ಯಾನಂದ ರವರಿಗೆ ವಿತರಿಸಿದರು. ಹಾಗೂ ಸಮುದಾಯ ಅಭಿವೃದ್ಧಿಗೆ ಸಂಬಂಧಪಟ್ಟ ಕಾಮಗಾರಿಗಳಿಗೆ ಪೂರಕವಾಗಿ ಯೋಜನೆಯಿಂದ ನೀಡುವ ಅನುದಾನಗಳ ಬಗ್ಗೆ ತಿಳಿಸಿದರು.

ಈ ಸಂದರ್ಭ ಕಲ್ಲೇರಿ ತರುವಾಡು ಮನೆಯ ಮುಖ್ಯಸ್ತ ಪುಟ್ಟಣ್ಣ ಗೌಡ, ಕುಟುಂಬದ ಹಿರಿಯರು ಬಾಲಕೃಷ್ಣ ಗೌಡ ಮತ್ತು ಚಂದ್ರಶೇಖರ ಪಂಡಿ, ಸಮಿತಿಯ ಕಾರ್ಯದರ್ಶಿ ಲೋಕೇಶ್, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಮಾನಂದ,ಎಣ್ಣೆಮಜಲು ಒಕ್ಕೂಟದ ಅಧ್ಯಕ್ಷೆ ಶೈಲಜಾ, ಕೋಶಾಧಿಕಾರಿ ಸಂಜೀವ,ಮೇಲ್ವಿಚಾರಕಿ ಕಲಾವತಿ, ಸೇವಾಪ್ರತಿನಿಧಿ ಕಾವೇರಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.