ಸುದ್ದಿ ವರದಿ ಫಲಶೃತಿ : ಹಾಲೆಮಜಲು ಅಂಗನವಾಡಿ ಬಳಿ ಬಿದ್ದ ಮರವನ್ನು ನಾಲ್ಕೂರು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಿಂದ ತೆರವು

0


ನಾಲ್ಕೂರು ಗ್ರಾಮದ ಹಾಲೆಮಜಲು ಅಂಗನವಾಡಿ ಬಳಿ ಹಾಲೆಮಜಲು – ಪಂಜಿಪಳ್ಳ ರಸ್ತೆಗೆ ಬಿದ್ದ ಮರವನ್ನು ಸುಬ್ರಮಣ್ಯ ಅರಣ್ಯ ಇಲಾಖೆಯವರ ನಿರ್ದೇಶನದಂತೆ ಎಸ್ ಕೆಡಿಆರ್‌ಡಿಪಿ ನಾಲ್ಕೂರು ಗ್ರಾಮದ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತೆರವುಗೊಳಿಸಿದರು.


ಸತೀಶ್, ಚಂದ್ರಶೇಖರ, ದೀಪಕ್, ಲೋಹಿತ್, ಪ್ರಜ್ವಲ್, ಕಾರ್ತಿಕ್, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸಹಕರಿಸಿದರು.