ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಸುಳ್ಯ ಕರಯೋಗಂ ಮಹಾಸಭೆ

0

ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ಮಹಾಸಭೆಯು ಜುಲೈ 14 ರಂದು ಸಂಘದ ಕಚೇರಿಯಲ್ಲಿ ಅಧ್ಯಕ್ಷ ಭಾಸ್ಕರನ್ ನಾಯರ್ ಮಧುವನರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕೆಎನ್ಎಸ್‌ಎಸ್ ಮಂಗಳೂರು ಕರಯೋಗಂನ ಮಾಜಿ ಅಧ್ಯಕ್ಷ ವಿಜಯಕುಮಾರ್ ನಾಯರ್, ಉಪಾಧ್ಯಕ್ಷ ಎನ್. ರವೀಂದ್ರನಾಥ್ ಆಗಮಿಸಿದ್ದರು.

ಚುನಾವಣಾಧಿಕಾರಿಯಾಗಿ ಕೇಂದ್ರ ಸಮಿತಿ ಪ್ರತಿನಿಧಿ, ನೆಲ್ಯಾಡಿ ಕರಯೋಗಂನ ರಘುನಾಥನ್ ನಾಯರ್ ಹಾಗೂ ವೀಕ್ಷಕರಾಗಿ ನೆಲ್ಯಾಡಿ ಕರಯೋಗಂ ಕಾರ್ಯದರ್ಶಿ ವಿನೋದ್‌ಕುಮಾರ್ ಆಗಮಿಸಿದ್ದರು.

ಮಂಗಳೂರು ಕರಯೋಗಂನ ಕಾರ್ಯಕಾರಿ ಸಮಿತಿ ಸದಸ್ಯ ಇ.ವಿ.ನಾಯರ್, ಕೋಶಾಧಿಕಾರಿ ಜೆ.ಕೆ.ನಾಯರ್ , ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವೀಣಾ ಪ್ರಭಾಕರನ್ ಉಪಸ್ಥಿತರಿದ್ದರು.

ಕರಯೋಗಂ ಕಾರ್ಯದರ್ಶಿ ಬಾಲಕೃಷ್ಣ ನಾಯರ್ ಎಸ್.ಬಿ. ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಭಾಕರ ನಾಯರ್ ಸ್ವಾಗತ್ ಲೆಕ್ಕಪತ್ರ ಮಂಡಿಸಿದರು.

ಇದೇ ಸಂದರ್ಭದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಚಿತ್ ಶಿವಾಲ ಅವರಿಗೆ ಕೆಎನ್‌ಎಸ್‌ಎಸ್ ನ ಎರಡನೇ ಹಂತದ ಸಹಾಯಧನವಾಗಿ ಕೇಂದ್ರ ಸಮಿತಿ ನೀಡಿರುವ 80 ಸಾವಿರ ಮೊತ್ತದ ಚೆಕ್ ಹಸ್ತಾಂತರಿಸಲಾಯಿತು.

ಸುಳ್ಯ ರೋಟರಿ ಶಾಲಾ ಸಂಚಾಲಕರಾಗಿ ಆಯ್ಕೆಗೊಂಡ ಪ್ರಭಾಕರ ನಾಯರ್ ಸ್ವಾಗತ್ ಹಾಗೂ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ ಅವರನ್ನು ಗೌರವಿಸಲಾಯಿತು.

ನಿರ್ಗಮನ ಅಧ್ಯಕ್ಷ ಭಾಸ್ಕರನ್ ನಾಯರ್, ನೂತನ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ, ನೂತನ ಕಾರ್ಯದರ್ಶಿ ಶಶಿಧರ ನಾಯರ್ ಉಬರಡ್ಕ ಮಾತನಾಡಿದರು.

ಕು. ಶ್ರೀಲಯ ಪ್ರಾರ್ಥಿಸಿದರು. ಚಂದ್ರಮೋಹನ್ ನಾಯರ್ ಕಾರ್ಯಕ್ರಮ ನಿರೂಪಿಸಿದರು.