ಸೋಣಂಗೇರಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಸಲುವಾಗಿ ಪೂರ್ವಭಾವಿ ಸಭೆ

0

ಶ್ರೀ ಕೃಷ್ಣ ಭಜನಾ ಮಂದಿರ ಸೋಣಂಗೇರಿ ಇದರ ಆಡಳಿತ ಸಮಿತಿಯ ಸದಸ್ಯರುಗಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಆಚರಣೆಯ ಸಲುವಾಗಿ ಪೂರ್ವಭಾವಿ ಸಭೆಯನ್ನು ಜು.20 ರಂದು ನಡೆಸಲಾಯಿತು.

ಸಭೆಯಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯ, ಕಿರಿಯರಿಗೆ ಆಟೋಟ ಸ್ಪರ್ಧೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯ ಸಲುವಾಗಿ ಆಗಸ್ಟ್ 19 ಭಾನುವಾರದಂದು ಮಂದಿರದ ಆವರಣದಲ್ಲಿ ಶ್ರಮದಾನ ಮಾಡುವುದೆಂದು ತೀರ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ನಿಕಟಪೂರ್ವ ಅಧ್ಯಕ್ಷ ರುಕ್ಮಯ್ಯಗೌಡ ಸುತ್ತುಕೋಟೆ ವಹಿಸಿದ್ದರು.

ಅಧ್ಯಕ್ಷ ಗಿರಿಧರ ಗೌಡ ನಾಯರ್ ಹಿತ್ಲು, ಉಪಾಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ, ಜೊತೆ ಕಾರ್ಯದರ್ಶಿ ಉದಯಕುಮಾರ್ ಆರ್ತಾಜೆ, ಗ್ರಾಮ ಪಂಚಾಯತ್ ಸದಸ್ಯ ಈಶ್ವರ ನಾಯ್ಕ್ ಸೋಣಂಗೇರಿ, ಖಜಾಂಚಿ ಶ್ರೀಮತಿ ಲೀಲಾವತಿ ನಡುಮನೆ, ಸದಸ್ಯರುಗಳಾದ ಲೋಕೇಶ್ ಗೌಡ ಸುತ್ತುಕೋಟೆ, ಪ್ರಶಾಂತ ಮಿತ್ತಮಜಲು, ಶ್ರೀಮತಿ ಮೋಹಿನಿ ನಡುಮನೆ, ಉಪಸ್ಥಿತರಿದ್ದರು.

ಅಧ್ಯಕ್ಷ ಶ್ರೀ ಗಿರಿಧರ ಗೌಡ ನಾಯರ್ ಹಿತ್ಲು ಸ್ವಾಗತಿಸಿ,ಸಂಚಾಲಕ ಸತ್ಯಶಾಂತಿತ್ಯಾಗಮೂರ್ತಿ ವಂದಿಸಿದರು.