ಕೊಡಿಯಾಲ : ಕಲ್ಲಪಣೆ ಬಸ್ ತಂಗುದಾಣ ದುರಸ್ಥಿ

0

ಕೊಡಿಯಾಲ ಗ್ರಾಮದ ಕಲ್ಲಪಣೆಯಲ್ಲಿ ಗಾಳಿ ಮಳೆಗೆ ಹಾನಿಯಾಗಿದ್ದ ಬಸ್ಸು ನಿಲ್ದಾಣ ದುರಸ್ಥಿಯಾಗಿದೆ.
ಕಳೆದ ವರ್ಷ ಮಳೆಗಾಲದಲ್ಲಿ ಬಸ್ಟೆಂಡ್ ಗಾಳಿ ಮಳೆಗೆ ಛಾವಣಿ ಹಾರಿ ಹೋಗಿತ್ತು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿತ್ತು.

ಈ ಬಗ್ಗೆ ಪತ್ರಿಕೆಗಳಲ್ಲಿ ವರದಿಯೂ ಬಂದಿತ್ತು. ಇದೀಗ ಪಂಚಾಯತ್ ವತಿಯಿಂದ ಬಸ್ ನಿಲ್ದಾಣ ದುರಸ್ಥಿಪಡಿಸಿರುತ್ತಾರೆ.