ದುಗ್ಗಲಡ್ಕ; ಅಪಾಯಕಾರಿ ಮರ ತೆರವುಗೊಳಿಸಿ- ಅಪಾಯ ತಪ್ಪಿಸಿ

0


ದುಗ್ಗಲಡ್ಕ ಸಮೀಪದ ನೀರಬಿದಿರೆ ಎಂಬಲ್ಲಿ ರಸ್ತೆ ಬದಿ ಒಣಗಿದ ಮರವೊಂದು ರಸ್ತೆಗೆ ವಾಲಿ ಕೊಂಡಿದ್ದು, ಈ ಅಪಾಯಕಾರಿ ಮರವನ್ನು ತೆರವುಗೊಳಿಸಿ ಸಂಭಾವ್ಯ ಅಪಾಯವನ್ನು ತಪ್ಪಿಸಬೇಕಾಗಿದೆ.


ನೀರಬಿದಿರೆ ರಾಮಣ್ಣ ನಾಯ್ಕರ ಮನೆ ಬಳಿ ಒಣಗಿದ ಮರವೊಂದು ದುಗ್ಗಲಡ್ಕ- ಕೊಡಿಯಾಲಬೈಲ್ ರಸ್ತೆ ಗೆ ವಾಲಿಕೊಂಡಿದ್ದು, ಗಾಳಿ ಮಳೆಗೆ ಮರ ಬಿದ್ದಲ್ಲಿ ಕೆಳಗಡೆ ಹಾದು ಹೋಗುವ ಹೆಚ್ ಟಿ ಲೈನ್ ವಿದ್ಯುತ್ ತಂತಿಯ ಮೇಲೆ ಬೀಳುವ ಸಾಧ್ಯತೆ ಇದ್ದು, ಇಂತಹ ಅಪಾಯ ಸಂಭವಿಸುವ ಮುನ್ನ ಮೆಸ್ಕಾಂ ಅಥವಾ ಸಂಬಂಧಪಟ್ಟ ಇಲಾಖೆ ಮರ ತೆರವು ಗೊಳಿಸಬೇಕು.ಅಂತಹದ್ದೇ ಅಪಾಯಕಾರಿ ಮರ ಸಮೀಪದ ಜಗದೀಶ್ ಅಮೈ ಮನೆ ಬಳಿಯಲ್ಲಿಯೂ ಇದ್ದು ಅದನ್ನೂ ತೆರವುಗೊಳಿಸಬೇಕಾಗಿದೆ.