ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ – ಸನ್ಮಾನ

0

ಗುತ್ತಿಗಾರು ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಮತ್ತು ಸಿ. ಡಿ. ದಿನೇಶ್ ಚೆಮ್ನೂರು ಹವಾಲ್ದಾರ ಇವರಿಗೆ ಸನ್ಮಾನ ಕಾರ್ಯಕ್ರಮವು ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲ. ಕುಶಾಲಪ್ಪ ತುಂಬತ್ತಾಜೆ ಇವರ ಅಧ್ಯಕ್ಷತೆಯಲ್ಲಿ ಜು.29 ರಂದು ಜರಗಿತು.

ಸನ್ಮಾನ ಸ್ವೀಕರಿಸಿದ ದಿನೇಶ್ ರವರು ಕಾರ್ಗಿಲ್ ಯುದ್ಧದ ವಿವರಣೆಯನ್ನು ಹೇಳಿ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸೇನೆಗೆ ಸೇರುವಂತೆ ಪ್ರೋತ್ಸಾಹಿಸಿದರು. ದೇಶಪ್ರೇಮದ ಪ್ರತಿಜ್ಞಾ ವಿಧಿಯನ್ನು ಸಭೆಯಲ್ಲಿದ್ದ ಎಲ್ಲರಿಗೂ ಮಾಡಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಚೆನ್ನಮ್ಮ ಪಿ. ಪ್ರಭಾರ ಪ್ರಾಂಶು
ಪಾಲರು ಸ.ಪ.ಪೂ.ಕಾ. ಗುತ್ತಿಗಾರು ಭಾಗವಹಿಸಿ ಶುಭ ಹಾರೈಸಿದರು. ಲ. ಕಾರ್ಯದರ್ಶಿ ವೆಂಕಪ್ಪ ಗೌಡ ಕೇನಾಜೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಖಜಾಂಜಿ ಮಣಿಯಾನ ಪುರುಷೋತ್ತಮ ವಂದಿಸಿದರು.
ಕಾಲೇಜಿನ ಇತಿಹಾಸ ಉಪನ್ಯಾಸಕಿ ಶ್ರೀಮತಿ ಪ್ರೀತಿ ರೈ ಕಾರ್ಯಕ್ರಮ ನಿರೂಪಿಸಿದರು.