ಜಯನಗರ :ರಸ್ತೆಯ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಹರಿಯುವ ನೀರು

0

ಸುಳ್ಯ ಜಯನಗರ ಪರಿಸರದಲ್ಲಿ ರಸ್ತೆಗಳ ಬದಿಯಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಗಳಿಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ.

ಜಯನಗರ ಅಂಗನವಾಡಿ ಕೇಂದ್ರ,ಮೈತ್ರಿ ಮಹಿಳಾ ಮಂಡಲ,ಅಂಗನವಾಡಿ ಕೇಂದ್ರ, ಜಯನಗರ ಮದರಸ ಸಮೀಪದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಸ್ಥಳೀಯ ಕೆಲವು ಮನೆ ಮತ್ತು ಕಟ್ಟಡ ಹಾಗೂ ಮದರಸ ಆವರಣಕ್ಕೆ ಬರುತ್ತಿದ್ದು ಸ್ಥಳೀಯರಿಗೆ ಸಮಸ್ಯೆ ಉಂಟು ಮಾಡಿದೆ.


ಈ ಬಗ್ಗೆ ಅನೇಕ ಬಾರಿ ಸಂಬಂಧ ಪಟ್ಟವರ ಗಮನಕ್ಕೆ ಮಾಹಿತಿ ನೀಡಿದ್ದು ಅವರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ಸಾರ್ವಜನಿಕರು ಅವರ ಅಸಹಾಯಕತೆಯನ್ನು ಹೇಳುತ್ತಿದ್ದಾರೆ.