ಜಾಲ್ಸೂರು: ಬರೆ ಜರಿದು ತೋಟಕ್ಕೆ ಹಾನಿ

0

ಭಾರೀ ಮಳೆಗೆ ಮರ ಸಮೇತವಾಗಿ ಬರೆ ಜರಿದು ಕೃಷಿ ತೋಟಕ್ಕೆ ಹಾನಿಯಾದ ಘಟನೆ ಜಾಲ್ಸೂರು ಗ್ರಾಮದ ಮರಸಂಕದಲ್ಲಿ ಆ.1ರಂದು ಸಂಭವಿಸಿದೆ.

ಜಾಲ್ಸೂರಿನ ಮರಸಂಕ ಕೃಷ್ಣಪ್ಪ ಗೌಡರ ತೋಟದ ಪಕ್ಕದಲ್ಲಿ ಎತ್ತರ ಪ್ರದೇಶದಲ್ಲಿದ್ದ ಮರ ಬರೆ ಸಮೇತ ಕುಸಿದು ತೋಡಿಗೆ ಬಿದ್ದಿದ್ದು, ಕೃಷ್ಣಪ್ಪ ಗೌಡರ ಕೃಷಿ ತೋಟದಲ್ಲಿದ್ದ ಸುಮಾರು ಹತ್ತಕ್ಕೂ ಅಧಿಕ ಅಡಿಕೆ ಮರಗಳಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.


ಸ್ಥಳಕ್ಕೆ ಜಾಲ್ಸೂರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಹಾಗೂ ಗ್ರಾಮ ಆಡಳಿತಾಧಿಕಾರಿ ಶಾಹಿನ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.