ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಅರಣ್ಯ ಬಳಕೆ ಹಾಗೂ ಸಂರಕ್ಷಣಾ ಬಗ್ಗೆ ಮಾಹಿತಿ

0

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ನಡೆದ ವಾರದ ಸಪ್ತಾಹಿಕ ಸಭೆಯಲ್ಲಿ ಅರಣ್ಯ ಸದ್ಬಳಕೆ, ಅರಣ್ಯದ ಉಪಯೋಗಗಳು, ಅರಣ್ಯ ಸಂರಕ್ಷಿಸುವ ಬಗ್ಗೆ ವಿವರವಾದ ಮಾಹಿತಿಗಳನ್ನು ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಮನೋಜ್ ವಿವರವಾದ ಮಾಹಿತಿಗಳನ್ನ ನೀಡಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ರೋಟರಿ ಜೋನಲ್ ಲೆಪ್ಟಿನೆಂಟ್ ವಿಶ್ವನಾಥ ನಡು ತೋಟ, ಕಾರ್ಯದರ್ಶಿ ಚಿದಾನಂದ ಕುಳ ಪೂರ್ವ ಅಧ್ಯಕ್ಷ ರುಗಳಾದ ಕಿಶೋರ್ ಕುಮಾರ್ ಕೂಜುಗೋಡು, ಬಾಲಕೃಷ್ಣ ಪೈ ಗೋಪಾಲ್ ಎಣ್ಣೆ ಮಜಲ್, ಭರತ್ ನೆಕ್ರಾಜ ,ಲೋಕೇಶ್ ಬಿ ಎನ್, ಕೋಶಾಧಿಕಾರಿ ಜಯಪ್ರಕಾಶ್, ಸದಸ್ಯರಾದ ದಿನೇಶ್ ಎಣ್ಣೆ ಮಜಲ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.