ಕುಲ್ಕುಂದ: ರಾಜ್ಯ ಹೆದ್ದಾರಿ ಚರಂಡಿ ದುರವಸ್ಥೆ, ರಸ್ತೆಯಲ್ಲಿ ಹರಿಯುವ ನೀರು

0

ಸುಬ್ರಹ್ಮಣ್ಯ ಕುಲ್ಕುಂದದಲ್ಲಿ ರಾಜ್ಯ ಹೆದ್ದಾರಿ ಚರಂಡಿ ದುರವ್ಯಸ್ಥೆಯಿಂದಾಗಿ , ರಸ್ತೆಯಲ್ಲಿ ನೀರು ಹರಿಯುತಿದ್ದು ವಾಹನ ಸವಾರರಿಗೆ ಭಾರಿ ತೊಂದರೆ ಉಂಟಾಗುತ್ತಿದೆ.

ಚರಂಡಿ ಇದ್ದರೂ ಸೈಡ್ ಕಟ್ಟಿದ ತಡೆ ಗೋಡೆ, ಕೆಲ ಕಡೆ ಸ್ಲ್ಯಾಬ್ ಮುರಿದು ಬಿದ್ದು ಚರಂಡಿ ಬ್ಲಾಕ್ ಆಗಿದೆ. ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಹಾಗೇ ಇದೆ. ಈ ಬಗ್ಗೆ ಪಿ.ಡಬ್ಲ್ಯೂಡಿ ಗೆ ಹಲವು ಭಾರಿ ಪಂಚಾಯತ್ ನಿಂದ ಮನವಿ ನೀಡಿದರೂ ಕ್ರಮ ಕೈಗೊಳ್ಳಲಿಲ್ಲ ಎಂದು ಗ್ರಾ.ಪಂ ಸದಸ್ಯರು ದೂರಿಕೊಂಡಿದ್ದಾರೆ.