ಪೆರುವಾಜೆ ಸ.ಪ್ರ.ದರ್ಜೆ ಕಾಲೇಜು ಪ್ರಾಂಶುಪಾಲ ದಾಮೋದರ ಕಣಜಾಲು ಮರಳಿ ಚಿಕ್ಕಮಗಳೂರಿಗೆ ವರ್ಗಾವಣೆ

0

ಪ್ರಭಾರ ಪ್ರಾಂಶುಪಾಲರನ್ನು ಮೂಲ ಕಾಲೇಜಿಗೆ ಹಿಂದಿರುಗುವಂತೆ ಕಾಲೇಜು ಶಿಕ್ಷಣ ಇಲಾಖೆಯ ಆದೇಶ

ರಾಜ್ಯದ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಂದ ಇತರೆ ಕಾಲೇಜುಗಳಲ್ಲಿ ಅನ್ಯ ಕಾರ್ಯನಿಮಿತ್ತ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಪ್ರಭಾರ ಪ್ರಾಂಶುಪಾಲರನ್ನು ಮೂಲ ಕಾಲೇಜಿಗೆ ಹಿಂದಿರುಗುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ನೀಡಿದ್ದು ಪೆರುವಾಜೆಯ ಬೆಳ್ಳಾರೆ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾಮೋದರ ಕಣಜಾಲು ಅವರು ಚಿಕ್ಕಮಗಳೂರಿನ ತಮ್ಮ ಮಾತೃ ಕಾಲೇಜಿಗೆ ಮರಳಲಿದ್ದಾರೆ.

ಕನಕಮಜಲು ಗ್ರಾಮದ ಕಣಜಾಲಿನವರಾಗಿರುವ ದಾಮೋದರ ಕಣಜಾಲು ಅವರು ಚಿಕ್ಕಮಗಳೂರಿನ ಸರಕಾರಿ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕಳೆದ ಒಂದು ವರ್ಷ ಹತ್ತು ತಿಂಗಳಿನಿಂದ ಪೆರುವಾಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಾಂಶುಪಾಲರ ಪ್ರಭಾರವನ್ನು ಆಯಾ ಕಾಲೇಜಿನ ಪ್ರಾಧ್ಯಾಪಕರು ಸಹ ಮತ್ತು ಸಹಾಯಕ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಿ ಬಿಡುಗಡೆಗೊಳ್ಳುವಂತೆ ಆದೇಶ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅದರಂತೆ ಕಣಜಾಲು ಅವರು ಚಿಕ್ಕಮಗಳೂರು ಸರಕಾರಿ ಮಹಿಳಾ ಕಾಲೇಜಿಗೆ ಕರ್ತವ್ಯಕ್ಕೆ ಹಿಂತಿರುಗಲಿದ್ದಾರೆ.