ಕಲ್ಲಪಳ್ಳಿ: ಬಿಜೆಪಿ ಬೂತ್ ಸಮಿತಿ ವತಿಯಿಂದ ಪತ್ತುಕುಡಿ,ಮಾರಾಟಚೇರಿ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ

0

ಕಲ್ಲಪಳ್ಳಿ
ಭಾರತೀಯ ಜನತಾ ಪಾರ್ಟಿಯ ಬೂತ್ ಸಮಿತಿ ವತಿಯಿಂದ ಪನತ್ತಡಿ ಗ್ರಾಮ ಪಂಚಾಯತ್ 6 ನೇ ವಾರ್ಡ್ ವ್ಯಾಪ್ತಿಯ ಪತ್ತುಕುಡಿ, ಮಾರಾಟಚೇರಿ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿಗೆ ಒಳಗಾಗಿರುವ ಸಂತ್ರಸ್ತ 17 ಆದಿವಾಸಿ ಕುಟುಂಬಗಳಿಗೆ ಅವಶ್ಯಕ ಆಹಾರ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಪನತ್ತಡಿ ಪಂಚಾಯತ್ ಸದಸ್ಯ, ಬಿಜೆಪಿ ಮಂಡಲ ಕಾರ್ಯದರ್ಶಿ ವೇಣು ಗೋಪಾಲ್ ಕೆ ಕೆ, ಬಿಜೆಪಿ ಮಂಡಲ ಸದಸ್ಯರಾದ ಜಯರಾಮ್ ಮಾಸ್ತರ್, ನಂದಕುಮಾರ್ ಬಾಟೋಳಿ, ಪಂಚಾಯತ್ ಜನರಲ್ ಸೆಕ್ರಟರಿ ಪ್ರದೀಶ್, ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ, ಬೂತ್ ಸಮಿತಿ ಅಧ್ಯಕ್ಷ ರಾಜಶೇಖರ್ ದೊಡ್ಡಮನೆ, ಕಾರ್ಯದರ್ಶಿ ರಾಜೇಶ್ ಪೆರುಮುಂಡ,ಕಾರ್ಯಕರ್ತರಾದ ನಿರ್ಮಲನ್ ಕಮ್ಮಾಡಿ, ಶಂಕರನ್ ಕಮ್ಮಾಡಿ, ಮಹೇಶ್ ಪೆರುಮುಂಡ, ಪವನ್ ಮೂಲೆಹಿತ್ಲು ಉಪಸ್ಥಿತರಿದ್ದರು.