ಕೇರ್ಪಡ ದೇವಸ್ಥಾನದಲ್ಲಿ ಶ್ರಮದಾನದ ಮೂಲಕ ಶುಚಿತ್ವ

0


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದಿಯ ಶೌರ್ಯ ವಿಪತ್ತು ಘಟಕ ನಿಂತಿಕಲ್ಲು ಮತ್ತು ಶ್ರೀ ವರಮಹಾಲಕ್ಷ್ಮಿ ಸಮಿತಿ ಮತ್ತು ಭಕ್ತಾದಿಗಳಿಂದ ದೇವಸ್ಥಾನದ ವಠಾರ ಶ್ರಮದಾನದ ಮೂಲಕ ಶುಚಿತ್ವ ನಡೆಯಿತು.


ಶೌರ್ಯ ವಿಪತ್ತು ಘಟಕ ಸದಸ್ಯರು ಕಲ್ಯಾಣಿ ಕೆರೆಯ ಸುತ್ತಲು ಚರಂಡಿ ಹೂಳು ತೆಗೆಯುವುದು, ಇನ್ನಿತರ ಕೆಲಸಗಳನ್ನು ಧಾರ್ಮಿಕ ಕೇಂದ್ರದ ಅಡಿಯಲ್ಲಿ ಶ್ರಮದಾನ ಕೈಗೊಂಡರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಮತ್ತು ಸದಸ್ಯರು, ಶೌರ್ಯ ವಿಪತ್ತು ಘಟಕದ ಪ್ರತಿನಿಧಿ ದಿನೇಶ್

ಪಜಿಂಬಿಲ, ಸೇವಪ್ರತಿನಿಧಿ ರತ್ನಾವತಿ ಕಲ್ಲಡ್ಕ ಮತ್ತು ಸದಸ್ಯರು, ಶ್ರೀ ವರಮಹಾಲಕ್ಷ್ಮಿ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದರು.