ದರ್ಖಾಸ್ತು : ಆರ್.ಕೆ.ಭಟ್ ನೇತೃತ್ವದಲ್ಲಿ ರಸ್ತೆ ಶ್ರಮದಾನ

0

ದರ್ಖಾಸ್ತು ಕೆ.ಎಫ್.ಡಿ.ಸಿ.ರಬ್ಬರ್ ಫ್ಯಾಕ್ಟರಿ ಸಮೀಪ ಮುಖ್ಯ ರಸ್ತೆಯ ಹೊಂಡಗಳನ್ನು ಮುಚ್ಚುವ ಮೂಲಕ ಶ್ರಮದಾನ ಮಾಡಲಾಯಿತು.
ಫ್ಯಾಕ್ಟರಿ ಸಮೀಪ ಸೇತುವೆಯ ಮೇಲೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು ಮತ್ತು ಮಣ್ಣಿನ, ಹೊಯಿಗೆಯ ದಿಬ್ಬಗಳನ್ನು ತೆಗೆದು ಹೊಂಡ ಮುಚ್ಚಲಾಯಿತು.
ಮೇಲಿನ ರಸ್ತೆಯಿಂದ ಮಳೆ ನೀರು ಕೊಚ್ಚಿಕೊಂಡು ಬಂದು ಸಮಸ್ಯೆಯಾಗಿದ್ದು
ಆರ್.ಕೆ.ಭಟ್ ರವರ ನೇತೃತ್ವದಲ್ಲಿ ಶ್ರಮದಾನ ಮಾಡಲಾಯಿತು.


ಹಲವು ವಾಹನಗಳು ಇಲ್ಲಿ ಹೊಂಡಗಳಿಗೆ ಬಿದ್ದು ಹಾನಿಯಾಗಿದ್ದವು ಅಲ್ಲದೆ ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ಕೂಡ ನಡೆದಿರುವುದಾಗಿ ತಿಳಿದು ಬಂದಿದೆ.
ಆರ್.ಕೆ.ಭಟ್ ರವರ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ.