ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ

0

ಅಧ್ಯಕ್ಷ: ಜೆ ಹರ್ಷ, ಉಪಾಧ್ಯಕ್ಷ; ಯಂ. ಬಾಲಕೃಷ್ಣ

ಕಲ್ಮಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆದು ಎಲ್ಲಾ 11ಸ್ಥಾನಗಳಿಗೂ ತಲಾ ಒಂದರಂತೆ ನಾಮ ಪತ್ರ ಸಲ್ಲಿಕೆಯಾಗಿರುವುದರಿಂದ ಅವಿರೋಧ ಆಯ್ಕೆಯಾದರು.

ಬಳಿಕ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಕೂಡ ಅವಿರೋಧವಾಗಿ ನಡೆಯಿತು.

ಅಧ್ಯಕ್ಷರಾಗಿ ಜೆ.ಹರ್ಷ, ಉಪಾಧ್ಯಕ್ಷರಾಗಿ ಯಂ ಬಾಲಕೃಷ್ಣ, ನಿರ್ದೇಶಕರಾಗಿ ರವೀಂದ್ರ ಯಂ, ಬೆಳ್ಯಪ್ಪ ಕೆ, ಗಂಗಾಧರ ಭಟ್ ಯನ್, ನಾರಾಯಣ ಕೆ, ಶ್ರೀಮತಿ ಅನುಪಮ , ಹೊನ್ನಪ್ಪ ಗೌಡ, ಯಂ ಜಯ ರೈ, ಶ್ರೀಮತಿ ಯಮುನಾ ಡಿ, ಬಿ ನಾರಾಯಣ ನಾಯ್ಕ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶಿವಲಿಂಗಯ್ಯ ಕರ್ತವ್ಯ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀಮತಿ ಜಯಂತಿ ಸಹಕರಿಸಿದರು.