ನಾಳೆ ಗುತ್ತಿಗಾರಿನಲ್ಲಿ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ.ನ ಶಾಖೆ ಉದ್ಘಾಟನೆ

0

ಸಂಸದರು, ಶಾಸಕರು ಭಾಗಿ

ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲಾಗಿರುವ. ದಕ್ಷಿಣ-ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ.
ಇದರ 8ನೇ ಶಾಖೆಯು ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಆ.17 ರ ಸಂಜೆ 4.00 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಮಂಗಳೂರು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶಾಖೆಯನ್ನು ಉದ್ಘಾಟಿಸಲಿದ್ದಾರೆ.

ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ. ನ ವ್ಯವಸ್ಥಾಪಕ ನಿರ್ದೇಶಕರಾದ ಅಶ್ವಿನ್ ಜೋಯಲ್ ನೊರೊನ್ಹಾ ಸಭಾ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸುಳ್ಯ ವಿಧಾನಸಭಾ ಸದಸ್ಯರಾದ,
ಕುಮಾರಿ ಭಾಗೀರಥಿ ಮುರುಳ್ಯ,
ಮೀನುಗಾರಿಕೆ ಹಾಗೂ ಬಂದರು ಮಾಜಿ ಸಚಿವ ಎಸ್. ಅಂಗಾರ, ಮಾಜಿ ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲು, ರಾಷ್ಟ್ರೀಯ ರಬ್ಬರ್ ಮಂಡಳಿ, ಕೇಂದ್ರ ವಾಣಿಜ್ಯ ಸಚಿವಾಲಯ ನವದೆಹಲಿ ಇದರ ಸದಸ್ಯರಾದ
ಕೇಶವ ಪ್ರಸಾದ್ ಮುಳಿಯ,
ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ,
ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಸಿ.ಎ. ಬ್ಯಾಂಕ್ ಗುತ್ತಿಗಾರು ಇದರ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮಿತ್ರ ಮೂಕಮಲೆ, ಬಿಜೆಪಿ ಮಂಡಲ ಸಮಿತಿ ಸುಳ್ಯ ಇದರ ಅಧ್ಯಕ್ಷರಾದ
ವೆಂಕಟ್ ವಳಲಂಬೆ. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷರಾದ
ಭರತ್ ಮುಂಡೋಡಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕೂಜುಗೋಡು,
ಸಂತ ಮರಿಯಮ್ಮನವರ ದೇವಾಲಯ ಗುತ್ತಿಗಾರು ಇದರ ರೆl ಫಾ। ಆದರ್ಶ್ ಜೋಸೆಫ್,
ಶ್ರೀ ದೇವಿ ಸಿಟಿ ಕಾಂಪ್ಲೆಕ್ಸ್ ಗುತ್ತಿಗಾರು ಇದರ ಮಾಲಕರಾದ ಶ್ರೀ ದೇವಿ ಪ್ರಸಾದ್ ಚಿಕ್ಮುಳಿ ಭಾಗವಹಿಸಲಿದ್ದಾರೆ.


ಕಾರ್ಯಕ್ರಮದಲ್ಲಿ
ನಿವೃತ್ತ ಬ್ಲಾಕ್ ಕ್ಯಾಟ್ ಕಮಾಂಡೋ ಬಹ್ರೈನ್ ಹಾಗೂ ರಾಜ್ಯ ವಾಲಿಬಾಲ್ ಆಟಗಾರರಾದ ಬಾಕೋ ಫಿಲಿಫ್, ಕಾರ್ಗಿಲ್ , ಲೇಹ್, ಲಡಾಕ್‌ಗಳಲ್ಲಿ ಭಾರತೀಯ ಸೇನೆಯೊಂದಿಗೆ 2000 ಕಿ.ಮಿ ಬೈಕ್ ರ್ಯಾಲಿಯಲ್ಲಿ ಭಾಗಿಯಾದ ಸಾಹಸಿ ಕುಮಾರಿ ವೃಷ್ಠಿ ಮಲ್ಕಜೆ, ಯೇನೆಕಲ್ಲಿನ
ಖ್ಯಾತ ನಾಟಿ ವಿಷ ವೈದ್ಯರಾದ
ನಾಗೇಶ್ ನೆಕ್ರಾಜೆ, ಖ್ಯಾತ ಯುವಯಕ್ಷ ಭಾಗವತೆ
ಕುಮಾರಿ ರಚನಾ ಚಿದ್ಗಲ್,
ಭಾರತೀಯ ಅರೆ ಸೇನಾಪಡೆಯ ನಿವೃತ್ತ ಸೈನಿಕರಾದ
ಶ್ರೀಮತಿ ಅನಿತಾ ಮಹೇಶ್ ಕೊಪ್ಪತಡ್ಕ, ಭಾರತೀಯ ಭೂಸೇನೆಯ ನಿವೃತ್ತ ಸೈನಿಕರಾದ ಮಹೇಶ್ ಕೊಪ್ಪತಡ್ಕ ಇವರುಗಳಿಗೆ ಸನ್ಮಾನ ನಡೆಯಲಿದೆ.