ಅಧಿವಕ್ತಾ ಪರಿಷತ್ ವತಿಯಿಂದ ಗುರು ವಂದನ ಕಾರ್ಯಕ್ರಮ

0

ಆ.17ರಂದು ಹಿರಿಯ ನ್ಯಾಯವಾದಿ ಬಿ ವೆಂಕಪ್ಪ ಗೌಡ ರವರಿಗೆ ಗೌರವಾರ್ಪಣೆ ಮಾಡುವ ಮೂಲಕ ಬಿ ವೆಂಕಪ್ಪ ಗೌಡ ರವರ ಮನೆಯಲ್ಲಿ ಗುರುವಂದನ ಕಾರ್ಯಕ್ರಮ ನಡೆಯಿತು.

ಅಧಿವಕ್ತಾ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ರಾದ ನ್ಯಾಯವಾದಿ ಜಗದೀಶ್ ಡಿ ಪಿ ಯವರು ಗುರುವಿನ ಮಹತ್ವ ಕುರಿತು ಮಾತನಾಡಿದರು.

ಸುಳ್ಯ ವಕೀಲರ ಸಂಘದ ಅಧ್ಯಕ್ಷ ರಾದ ಹಿರಿಯ ನ್ಯಾಯವಾದಿ ಸುಕುಮಾರ್ ಕೋಡ್ತುಗುಳಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಅಧಿವಕ್ತಾ ಪರಿಷತ್ ನ ಸುಳ್ಯ ಘಟಕದ ಅಧ್ಯಕ್ಷ ರಾದ ಹರೀಶ್ ಬೂಡುಪನ್ನೆ ಅಧ್ಯಕ್ಷತೆ ವಹಿಸಿದ್ದರು.

ಅಧಿವಕ್ತಾ ಪರಿಷತ್ ನ ಸುಳ್ಯ ಘಟಕದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸಂದೀಪ್ ಮದುವೆಗದ್ದೆ ಸ್ವಾಗತಿಸಿ, ಅಧಿವಕ್ತಾ ಪರಿಷತ್ ನ ಸುಳ್ಯ ಘಟಕದ ರೆವೆನ್ಯೂ ವಿಭಾಗದ ಪ್ರಮುಖರಾದ ನ್ಯಾಯವಾದಿ ರಂಜಿತ್ ಕುಕ್ಕೇಟಿ ವಂದಿಸಿದರು.
ನ್ಯಾಯವಾದಿಗಳಾದ ಜಯಪ್ರಕಾಶ್ ಬೈತಡ್ಕ, ದಿನೇಶ್ ನಳಿಯಾರು, ಚಂದ್ರಶೇಖರ ಉದ್ದಂತಡ್ಕ, ತನುದೀಪ್ ಪೆಲ್ತಡ್ಕ,ಬಿ ವೆಂಕಪ್ಪ ಗೌಡ ರವರ ಪತ್ನಿ, ಪುತ್ರ ಅನಿಲ್ ಕುಮಾರ್, ಮೊಮ್ಮಗ ಉಪಸ್ಥಿತರಿದ್ದರು.