ಕಟ್ಟಡ ಕಾರ್ಮಿಕ ಸಂಘ ಚೆಂಬು ಘಟಕದ ವತಿಯಿಂದ ಜಾನಿ ಕೆ.ಪಿ. ಯವರಿಗೆ ಸನ್ಮಾನ

0

ಕಟ್ಟಡ ಕಾರ್ಮಿಕರ ಸಂಘ ಚೆಂಬು ಘಟಕದ ವತಿಯಿಂದ, ದೇಶದ ಪ್ರತಿಷ್ಠಿತ ಕಲ್ಯಾಣ ಮಂಡಳಿಯಾದ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಡಳಿತ ಮಂಡಳಿ ಸದಸ್ಯರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ನಿಯೋಜಿಸಲ್ಪಟ್ಟ ಜಾನಿ ಕೆ.ಪಿ. ಅವರನ್ನು ಸುಳ್ಯ ತಾಲೂಕಿನ ಹಿರಿಯ ಕಾರ್ಮಿಕ ನಾಯಕರಾದ ನಾಗರಾಜ್ ಹೆಚ್.ಕೆ.ಆನಂದ ಗೌಡ, ಕೃಷ್ಣ ಕೇರ್ಪಳ, ವಸಂತ ಪೆಲ್ತಡ್ಕ, ರಾಜ್ಯ ಮಹಿಳಾ ಸಮಿತಿ ಸದಸ್ಯೆಯಾದ ಭಾರತಿ ಬಿ ಹಾಗೂ ವಲಯ ಅಧ್ಯಕ್ಷರಾದ ಶ್ರೀಧರ ಕೆ.ಕೆ ,ಘಟಕದ ಗೌರವಾಧ್ಯಕ್ಷರಾದ ರಘುನಾಥ್ ಬಾಲೆಂಬಿ ಮತ್ತು ಇತರರ ಉಪಸ್ಥಿತಿಯಲ್ಲಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಬೋಜಪ್ಪ ಗೌಡ ಬಾಲೆಂಬಿ ವಹಿಸಿದ್ದರು. ಕಾರ್ಯದರ್ಶಿ ಪುಷ್ಪಕಲಾ ಸ್ವಾಗತಿಸಿ ಖಜಾಂಜಿ ನವೀನ್ ವಂದಿಸಿದರು.