ಸುಳ್ಯ ಕೊಡಿಯಾಲಬೈಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಶ್ರಮದಾನ

0

ಆದಿದ್ರಾವಿಡ ಯುವ ವೇದಿಕೆ ದ. ಕ ಹಾಗೂ ಸುಳ್ಯ ತಾಲೂಕು ಸಮಿತಿ ಮಹಿಳಾ ಸಮಿತಿ ಮತ್ತು ಗ್ರಾಮ ಘಟ ಸಮಿತಿಗಳ ನೇತೃತ್ವದಲ್ಲಿ ಸುಳ್ಯ ಕೊಡಿಯಾಲಬೈಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಆ.25 ರಂದು ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಯನ್ನು ಮಾಡಲಾಯಿತು,ಗಿಡ ಬಳ್ಳಿಗಳಿಂದ ಆವೃತವಾಗಿದ್ದ ರುದ್ರಭೂಮಿಯ ಆವರಣ ಹಾಗೂ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛ ಮಾಡಲಾಯಿತು.

ಈ ಸಂದರ್ಭದಲ್ಲಿ ಸಹಕಾರವನ್ನು ನೀಡಿದ ಉಬರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ಯುವ ವೇದಿಕೆಯಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು, ಸ್ವಚ್ಛತಾ ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಪಧಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು ಜೊತೆಗೆ ಉಬರಡ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹರೀಶ್ ರೈ ಯುವ ವೇದಿಕೆಯ ಕಾರ್ಯವನ್ನು ಪ್ರೋತ್ಸಾಹಿಸಿ ಮುಂದಿನ ದಿನಗಳಲ್ಲಿ ಯುವ ವೇದಿಕೆ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎಂದು ಹರಸಿದರು ಸಹಕರಿಸಿದ ಎಲ್ಲರಿಗೂ ಯುವ ವೇದಿಕೆಯಿಂದ ಕೃತಜ್ಞತೆ ಸಲ್ಲಿಸಲಾಯಿತು.