ಧರ್ಮಸ್ಥಳ ಯೋಜನೆ ವತಿಯಿಂದ ಮಹಮ್ಮದ್ ಕುಂಞ ಯವರಿಗೆ ಚಿಕಿತ್ಸೆಗಾಗಿ ಸಹಾಯಧನ

0

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗಾಂಧಿನಗರ ವಲಯದ ಪಯಸ್ವಿನಿ ಸಂಘದ ಸದಸ್ಯೆ ಸಮೀರ ಎಂಬವರ ಪತಿ ಮಹಮ್ಮದ್ ಕುಂಞ ಯವರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆಗಾಗಿ ಯೋಜನೆಯಿಂದ ಕ್ರಿಟಿಕಲ್ ಫಂಡ್ ನಿಂದ
ರೂ.20 ಸಾವಿರದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಸುಳ್ಯ ವಲಯಾಧ್ಯಕ್ಷ ಮನೋಹರರವರು ಮಂಜೂರಾತಿ ಪತ್ರವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಜನಜಾಗೃತಿ ವೇದಿಕೆ ಸುಳ್ಯ ವಲಯದ ಉಪಾಧ್ಯಕ್ಷ ವಿಶ್ವನಾಥ ಶೆಟ್ಟಿ, ಮೇಲ್ವಿಚಾರಕ ಶ್ರೀಮತಿ ಜಯಶ್ರೀ, ಸೇವಾಪ್ರತಿನಿಧಿ ಸೌಜನ್ಯ,ಪದಾಧಿಕಾರಿಗಳಾದ ಇಂದಿರಾ, ದೀಪಿಕಾ ಉಪಸ್ಥಿತರಿದ್ದರು.