ಕುಕ್ಕುಜಡ್ಕ :ದೊಡ್ಡತೋಟ ವಲಯ ಭಜನಾ ಪರಿಷತ್ ಸಭೆ

0

ಸುಳ್ಯ ತಾಲೂಕು ಭಜನಾ ಪರಿಷತ್ ನ ದೊಡ್ಡತೋಟ ವಲಯ ಸಭೆಯು ಇಂದು ಕುಕ್ಕುಜಡ್ಕ ಸೇವಾಕೇಂದ್ರ ದಲ್ಲಿ ನಡೆಯಿತು.

ಸಭೆ ಯ ಅಧ್ಯಕ್ಷತೆ ಯನ್ನು ಭಜನಾ ಪರಿಷತ್ ವಲಯ ಅಧ್ಯಕ್ಷರಾದ ವೆಂಕಟ್ರಮಣ ಡಿ.ಜೆ. ವಹಿಸಿದ್ದರು.

ತಾಲ್ಲೂಕು ಭಜನಾ ಪರಿಷತ್ ಅಧ್ಯಕ್ಷರಾದ ಯತೀಶ್ ರೈ ದೀಪ ಬೆಳಗಿಸಿ ಉದ್ಘಾಟಿಸಿ, ಭಜನಾ ಕಮ್ಮಟ ತಯಾರಿ ಭಜನಾ ಮಂಡಳಿ ಸಂಘಟನೆ ಬಗ್ಗೆ ಮಾಹಿತಿ ನೀಡಿದರು.

ಜಾಲ್ಸು ರು ವಲಯ ಮೇಲ್ವಿಚಾರಕರಾದ ತೀರ್ಥರಾಮ ಪ್ರಾಸ್ತವಿಕ ಮಾಹಿತಿ ನೀಡಿದರು. ಸೇವಾಪ್ರತಿನಿಧಿ ಚಂದ್ರಪ್ರಕಾಶ್ ಸ್ವಾಗತಿಸಿ, ಸೇವಾಪ್ರತಿನಿಧಿ ಶ್ರೀಮತಿ ದಿವ್ಯ ವಂದಿಸಿದರು.

ಸುಳ್ಯ ತಾಲೂಕು ನಿರ್ದೇಶಕರಾದ ದಯಾನಂದ ಕೊರತ್ತೋಡಿ, ಕೇಂದ್ರ ಭಜನಾ ಪರಿಷತ್ ಕೋಶಾಧಿಕಾರಿ ಮಹೇಶ್ ಮೆರ್ಕಜೆ, 2023ರ ಭಜನೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೋಡ್ತುಗು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದೊಡ್ಡತೋಟ ವಲಯದ ಸಮಿತಿಯನ್ನು ಪುನರ್ ರಚಿಸಲಾಯಿತು.

ಅಧ್ಯಕ್ಷರಾಗಿ ವೆಂಕಟ್ರಮಣ ಡಿ.ಜೆ., ಕೋಶಾಧಿಕಾರಿಯಾಗಿ ಮಹೇಶ್ ಮೇರ್ಕಜೆ, ವಲಯ ನಿರ್ದೇಶಕ ದಯಾನಂದ ಕೊರತ್ತೋಡಿಯವರ ಉಪಸ್ಥಿತಿಯಲ್ಲಿ ವಲಯ ಸಮಿತಿಗೆ ಉಳಿದ ಪದಾಧಿಕಾರಿಗಳ ನೇಮಕ ನಡೆಸಲಾಯಿತು.

ಉಪಾಧ್ಯಕ್ಷರಾಗಿ ನಾರಾಯಣ ಕೊಡ್ತುಗುಳಿ, ಹರಿಶ್ಚಂದ್ರ ಮತ್ತು ಶ್ರೀಮತಿ ವೀಣಾ ಪಡ್ಪು,
ಕಾರ್ಯದರ್ಶಿ ಗಳಾಗಿ ಶ್ರೀಮತಿ ಪೂರ್ಣಿಮಾ ಪಿಲಿಕಜೆ,
ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ಹೇಮಾವತಿ ತಂಟೆಪಾಡಿ ಆಯ್ಕೆಯಾದರು.