ಇಂಟೆಕ್ ಕಾಂಗ್ರೆಸ್ ವತಿಯಿಂದ ಕೆ.ಪಿ. ಜಾನಿಯವರಿಗೆ ಗೌರವ

0

ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಾಗಿ ಸರಕಾರದಿಂದ ನೇಮಕಗೊಂಡ ಕೆ.ಪಿ. ಜಾನಿಯವರಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ವತಿಯಿಂದ ಗೌರವ ಸಮರ್ಪಣೆ ಸಂಪಾಜೆಯಲ್ಲಿ ನಡೆಯಿತು.

ಸಂಪಾಜೆ‌ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಗೌರವ ಸಮರ್ಪಣೆ ಮಾಡಿದರು. ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ ಅಭಿನಂದಿಸಿ‌ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ನ.ಪಂ. ಸದಸ್ಯ ರಾಜು ಪಂಡಿತ್, ಕೆಪಿಸಿಸಿ ವಕ್ತಾರ ಶೌವಾದ್ ಗೂನಡ್ಕ, ಸಂಪಾಜೆ‌ ಗ್ರಾ.ಪಂ. ಅಧ್ಯಕ್ಷೆ ಸುಮತಿ ಶಕ್ತಿವೇಲು, ಮಾಜಿ ಅಧ್ಯಕ್ಷೆ ಯಮುನಾ, ಲಿಸ್ಸಿ ಮೋನಾಲಿಸಾ, ರಹೀಮ್ ಬೀಜದಕಟ್ಟೆ, ಅಬೂಸಾಲಿ, ಉಮ್ಮರ್ ಯು.ಹೆಚ್., ರಾಜು‌ ನೆಲ್ಲಿಕುಮೇರಿ, ಶಹೀದ್ ಪಾರೆ, ಲೂಕಾಸ್, ಎ.ಕೆ.ಇಬ್ರಾಹಿಂ, ವಸಂತ ಪೆಲ್ತಡ್ಕ, ಎ.ಕೆ.‌ಹನೀಫ್, ಸಿಲ್ವೆಸ್ಟರ್ ಡಿಸೋಜ ಮೊದಲಾದವರಿದ್ದರು.