ಬೆಳ್ಳಾರೆ ಸುಪ್ರಭ ಜ್ಯುವೆಲ್ಲರಿಯಲ್ಲಿ ಶ್ರೀ ಮಹಾಗಣಪತಿಗೆ ತಯಾರಾದ ಬೆಳ್ಳಿ ಕಿರೀಟದ ಹಸ್ತಾಂತರ

0

ವಿರಾಟ್ ಫ್ರೆಂಡ್ಸ್ ಬೆಳ್ಳಾರೆ ವತಿಯಿಂದ ದಾನಿಗಳ ಸಹಕಾರದಿಂದ ಶ್ರೀ ಮಹಾಗಣಪತಿಗೆ ಕೊಡಮಾಡಲ್ಪಟ್ಟ ಬೆಳ್ಳಿ ಕಿರೀಟವನ್ನು ಸುಪ್ರಭ ಜ್ಯುವೆಲ್ಲರ್ಸ್ ಮಾಲಕರಾದ ಸತ್ಯನಾರಾಯಣ ಆಚಾರ್ಯ ಮತ್ತು ಪ್ರಸಾದ್ ಆಚಾರ್ಯರವರು ವಿರಾಟ್ ಫ್ರೆಂಡ್ಸ್ ನ ಗೌರವಾಧ್ಯಕ್ಷ ಮಿಥುನ್ ಶೆಣೈ ಮತ್ತು ಅಧ್ಯಕ್ಷರಾದ ಸಂತೋಷ್ ಮಣಿಯಾಣಿ ಇವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ವಿರಾಟ್ ಫ್ರೆಂಡ್ಸ್ ನ ಪದಾಧಿಕಾರಿಗಳು, ಸದಸ್ಯರುಗಳು ಹಾಜರಿದ್ದರು.
ಸೆ.07 ರಂದು ಬೆಳ್ಳಾರೆಯ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ 53 ನೇ ವರ್ಷದ ಶ್ರೀ ಗಣೇಶೋತ್ಸವದ ಸಂದರ್ಭದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿ ಕಿರೀಟವನ್ನು ಸಮರ್ಪಿಸಲಾಗುವುದು.
ರಾಜಣ್ಣ ಆಚಾರ್ಯ ಈ ಬೆಳ್ಳಿ ಕಿರೀಟದ ಶಿಲ್ಪಿಗಳಾಗಿ ಸಹಕರಿಸಿದ್ದಾರೆ.