ದೆಹಲಿಯಲ್ಲಿ ಎನ್‌ಪಿಎಸ್/ಯುಪಿಎಸ್ ವಿರುದ್ಧ ಹೋರಾಟದ ಪೂರ್ವಭಾವಿ ಸಭೆ

0

ಸೆ. 16 ರಂದು ಎನ್.ಪಿ.ಎಸ್. ರಾಷ್ಟ್ರೀಯ ಅಧ್ಯಕ್ಷರಾದ ಬಿಪಿ ಸಿಂಗ್ ರಾವತ್ ನೇತೃತ್ವದಲ್ಲಿ ಎನ್‌ಪಿಎಸ್/ಯುಪಿಎಸ್ ತೆಗೆದು ಓ ಪಿ ಎಸ್ ಜಾರಿ ಮಾಡುವಂತೆ ಆಗ್ರಹಿಸಿ ನಡೆಸುವ ಹೋರಾಟದ ಪೂರ್ವಭಾವಿ ಸಭೆಯು ದೆಹಲಿಯಲ್ಲಿ ನಡೆಯಿತು.

ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ನಾಗನಗೌಡ ಎಂ ಎ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ನಾರಾಯಣಸ್ವಾಮಿ ಉಪಾಧ್ಯಕ್ಷರು ಇವರೊಂದಿಗೆ ರಾಜ್ಯ ಉಪಾಧ್ಯಕ್ಷ, ಸುಳ್ಯ‌ ಶಿಕ್ಷಣಾಧಿಕಾರಿಗಳ ಕಚೇರಿ ಉದ್ಯೋಗಿ ಪೃಥ್ವಿ ಕುಮಾರ್ ಟಿ ಭಾಗವಹಿಸಿದ್ದಾರೆ.

ಎನ್‌ಪಿಎಸ್ ನೌಕರರ ಹಿತಾಸಕ್ತಿ ಕಾಪಾಡುವುದೇ ನಮ್ಮ ಧೇಯ ಅದಕ್ಕಾಗಿ ಸದಾ ನಮ್ಮ ಸಮಯ ಮತ್ತು ನಿಷ್ಠೆ ಮೀಸಲಾಗಿರುತ್ತದೆ ಎಂದು ಪೃಥ್ವಿಕುಮಾರ್ ತಿಳಿಸಿದ್ದಾರೆ.