ಕಲಾವಿಕಾಸ ಕಳಂಜ ಅಧ್ಯಕ್ಷರಾಗಿ ಗಿರಿಧರ ಕಳಂಜ, : ಕಾರ್ಯದರ್ಶಿಯಾಗಿ ದಿಲೀಪ್ ಪೂಜಾರಿ ಕಳಂಜ

0

ಕಲಾವಿಕಾಸ ಕಳಂಜ ಇದರ ವಾರ್ಷಿಕ ಮಹಾಸಭೆಯು ಸೆ.11 ರಂದು ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಕಳಂಜ ವಠಾರದಲ್ಲಿ ನಡೆಯಿತು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆದ ಮೊಸರು ಕುಡಿಕೆ ಉತ್ಸವದ ಜಮಾ -ಖರ್ಚುನ್ನು ಸರ್ವನುಮತದಿಂದ ಅನುಮೋದಿಸಲಾಯಿತು.


ಮುಂದಿನ 2 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಗಿರಿಧರ ಕಳಂಜ ಹಾಗೂ ಕಾರ್ಯದರ್ಶಿಯಾಗಿ ದಿಲೀಪ್ ಪೂಜಾರಿ ಕಳಂಜ ಇವರನ್ನು ಸರ್ವನುಮತದಿಂದ ಆಯ್ಕೆಮಾಡಲಾಯಿತು. ಈ ಸಂದರ್ಭದಲ್ಲಿ ಕಲಾವಿಕಾಸ ಇದರ ಅಧ್ಯಕ್ಷರಾದ ಲೋಹಿತ್ ಕಟ್ಟತ್ತಾರು, ಕಾರ್ಯದರ್ಶಿ ಶಿವಪ್ರಸಾದ್ ಕಳಂಜ, ಶ್ರೀ ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಕಳಂಜ ಇದರ ಅಧ್ಯಕ್ಷರಾದ ಕರುಣಾಕರ ಶೆಟ್ಟಿ ನಾಲ್ಗುತ್ತು ಹಾಗೂ ಸಂಘದ ಸರ್ವಸದಸ್ಯರು ಹಾಜರಿದ್ದರು. ಗಿರಿಧರ ಕಳಂಜ ಸ್ವಾಗತಿಸಿ, ವಂದಿಸಿದರು.