ಕೊಲ್ಲಮೊಗ್ರು: ಶ್ರೀ ಕ್ಷೇ. ಧ. ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಿಡ ನಾಟಿ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಬ್ರಹ್ಮಣ್ಯ ವಲಯ ಇದರ ಸಾಮಾಜಿಕ ಅರಣೀಕರಣ ಕಾರ್ಯಕ್ರಮದಡಿಯಲ್ಲಿ ಕೊಲ್ಲಮೊಗ್ರು ವಠಾರದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.

ಸುಬ್ರಹ್ಮಣ್ಯ ವಲಯದ ವಿಪತ್ತು ನಿರ್ವಹಣಾ ಘಟಕ ಹಾಗೂ ಸುಬ್ರಹ್ಮಣ್ಯ ವಲಯ ಜನಜಾಗೃತಿ ಅದ್ಯಕ್ಷರು ಮಾಧವ ಚಾಂತಾಳ ಹಾಗೂ ತಾಲೂಕು ಯೋಜನಾಧಿಕಾರಿಗಳು ಮಾಧವ ಗೌಡ ಗಿಡ ನಾಟಿ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕೃಷಿ ಅದಿಕಾರಿಗಳು ರಮೇಶ್, ಮೇಲ್ವಿಚಾರಕ ಕೃಷ್ಣಪ್ಪ ವಿಪತ್ತು ನಿರ್ವಹಣಾ ಘಟಕದ ಸಂಚಾಲಕ ಸತೀಶ್ ಕಲ್ಮಕಾರು ಹಾಗೂ ವಿಪತ್ತು ಸದಸ್ಯರುಗಳು, ಬಿ ಒಕ್ಕೂಟದ ಅಧ್ಯಕ್ಷ ಹೇಮಂತ್ ದೋಲನ ಮನೆ ,ಸೇವಾ ಪ್ರತಿನಿಧಿಗಳಾದ ರೇಖಾ ಕಟ್ಟ, ಸಾವಿತ್ರಿ ನಿಡುಬೆ ಉಪಸ್ಥಿತರಿದ್ದರು.