ಅರಂಬೂರಿನಲ್ಲಿ ಶ್ರೀ ವಿನಾಯಕ ಇಂಡಸ್ಟ್ರೀಸ್ ಶುಭಾರಂಭ

0

ಅರಂಬೂರಿನ ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ಗುರುರಾಜ್ ನೆಡ್ಚಿಲು ಮತ್ತು ಭರತ್ ಪಡ್ಡಂಬೈಲು (ನೆಡ್ಚಿಲು) ರವರ ಪಾಲುದಾರಿಕೆಯ ಶ್ರೀ ವಿನಾಯಕ ಇಂಡಸ್ಟ್ರೀಸ್
ಸೆ.17 ರಂದು ಶುಭಾರಂಭಗೊಂಡಿತು.


ಅರ್ಚಕ ಅಭಿರಾಮ್ ಭಟ್ ಅರಂಬೂರು ರವರ ನೇತೃತ್ವದಲ್ಲಿ ಗಣಪತಿ ಹವನ ನಡೆಯಿತು. ಹಿರಿಯರಾದ ರಾಮಣ್ಣ ಪಡ್ಡಂಬೈಲು , ಮುದ್ದಯ್ಯ ನೆಡ್ಚಿಲು, ಶ್ರೀಮತಿ ಲಲಿತಾ ಪಡ್ಡಂಬೈಲು ,ಯಶೋಧ ನೆಡ್ಚಿಲು ರವರು ದೀಪ ಪ್ರಜ್ವಲಿಸಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಅಧ್ಯಕ್ಷ ರತ್ನಾಕರ ರೈ ಅರಂಬೂರು,
ಗಣಪತಿ ಭಟ್ ಮಜಿಗುಂಡಿ, ಎನ್.ಎ.ರಾಮಚಂದ್ರ, ಅಮ್ಮು ರೈ ಅರಂಬೂರು, ಕಾಂಪ್ಲೆಕ್ಸ್ ಮಾಲಕ ಸುಬ್ಬಣ್ಣ ರೈ ಅರಂಬೂರು, ಶಿವರಾಮ ರೈ ಅರಂಬೂರು, ಚಂದ್ರಶೇಖರ ನೆಡ್ಚಿಲು, ಜಯಪ್ರಕಾಶ್ ರೈ ಅರಂಬೂರು, ಬಾಲಚಂದ್ರ ಕೋಲ್ಚಾರು, ಶ್ರೀಮತಿ ಶೋಭಾ ಸುಬ್ಬಣ್ಣ ರೈ ಅರಂಬೂರು, ಚರಣ್ ರಾಜ್, ತ್ರಿಜಿತ್, ಸಾಕ್ಷಿ ನೆಡ್ಚಿಲು ಮತ್ತಿತರರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.


ನೂತನವಾಗಿ ಶುಭಾರಂಭಗೊಂಡಿರುವ ಸಂಸ್ಥೆಯಲ್ಲಿ ರೂಫ್ ವರ್ಕ್ಸ್, ಗೇಟ್, ರೈಲಿಂಗ್ಸ್, ಗ್ರಿಲ್ಸ್, ಶಟರ್ ವರ್ಕ್, ಸ್ಟೀಲ್ ವೆಲ್ಡಿಂಗ್ ಕೆಲಸವನ್ನು ನುರಿತ ಕೆಲಸಗಾರರಿಂದ ಕ್ಲಪ್ತ ಸಮಯದಲ್ಲಿ ಮಾಡಿಕೊಡುವುದಾಗಿ ಪಾಲುದಾರರು ತಿಳಿಸಿದರು.